Advertisement

ಹುಲಿ ಕುಣಿತಕ್ಕೆ ಶಿವಣ್ಣ  ಸ್ಟೆಪ್‌

07:30 AM Sep 13, 2017 | Team Udayavani |

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಯಲ್ಲಿ ಹುಲಿ ವೇಷಗಳ ಕುಣಿತ ಅಲ್ಲಲ್ಲಿ ಕಾಣುತ್ತಿರುವಾಗಲೇ, ಹುಲಿ ಕುಣಿತದ ಪ್ರಾಕ್ಟಿಸ್‌ ಮಾಡುತ್ತಿದ್ದ ಬೈಲೂರಿನ ರಾಮಸೇನಾ ತಂಡದ ಹುಡುಗರೊಂದಿಗೆ ಸೋಮವಾರ ಸಂಜೆ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಅವರು ಕೂಡ ಹೆಜ್ಜೆ ಹಾಕಿದ್ದಾರೆ. 

Advertisement

ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದ ಶೂಟಿಂಗ್‌ ಮಲ್ಪೆ- ಪಡುಕೆರೆಯಲ್ಲಿ ನಡೆಯುತ್ತಿದ್ದು, ಚಿತ್ರ ತಂಡವೂ ಪಡುಕೆರೆಯಲ್ಲಿ ಬೀಡುಬಿಟ್ಟಿದೆ. ಶೂಟಿಂಗ್‌ ವೇಳೆ ಬೈಲೂರು ಇಷ್ಟ ಮಹಾಲಿಂಗೇಶ್ವರ ದೇವಸ್ಥಾನದ ರಾಮಸೇನಾ ತಂಡವೂ ಹುಲಿವೇಷ ಕುಣಿತಕ್ಕೆ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ನಟ ಶಿವರಾಜ್‌ ಕುಮಾರ್‌ ಹಾಗೂ ಚಿತ್ರದ ನಟಿ ಮಾನ್ವಿತಾ ಹರೀಶ್‌ ಸಹ ಅವರೊಂದಿಗೆ ಕುಣಿದರು.

Advertisement

Udayavani is now on Telegram. Click here to join our channel and stay updated with the latest news.

Next