Advertisement

ಕೋವಿಡ್-19 ಮಾರಿ ವಿರುದ್ಧ ಒಗ್ಗಟ್ಟು ತೋರಿಸುವ ಸಂದರ್ಭ: ಮುರುಘಾ ಶ್ರೀ

03:54 PM Apr 05, 2020 | keerthan |

ಚಿತ್ರದುರ್ಗ: ಮಹಾಮಾರಿ ಕೋವಿಡ್-19 ಸೋಂಕು ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆಯನ್ನು ಜನತೆ ಬೆಂಬಲಿಸಬೇಕು ಎಂದು ಇಲ್ಲಿನ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮನವಿ ಮಾಡಿದ್ದಾರೆ.

Advertisement

ಕೋವಿಡ್ 19 ಜನರ ಬದುಕು ಬಲಿ ಪಡೆಯುತ್ತಿದೆ. ಸಂಕಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನ ಜಾಗೃತಿ ಮೂಡಿಸಿ, ಸೂಕ್ತ ಕರೆಗಳನ್ನು ನೀಡಿ ದೇಶದ ಜನರಲ್ಲಿ ಸ್ಪೂರ್ತಿ, ಪ್ರೇರಣೆ ತುಂಬುತ್ತಿದ್ದಾರೆ. ಪ್ರಧಾನಿ ಮೋದಿ ಕರೆಗೆ ಎಲ್ಲರೂ ಸ್ಪಂದಿಸಬೇಕು ದೇಶದ ಜನರೆಲ್ಲಾ ಭಾಗವಹಿಸಿ ಸಂಘಟನೆ ತೋರಬೇಕಿದೆ. ಕೋವಿಡ್-19 ಸೋಂಕು ಮಾರಿಯ ವಿರುದ್ಧ ಒಗ್ಗಟ್ಟಿನಿಂದ ಜಾಗೃತಿ ಮೂಡಿಸಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next