Advertisement

25ರಿಂದ ಶ್ರೀಕ್ಷೇತ್ರ ವರದಪುರ ಪ್ರವೇಶಕ್ಕೆ ಭಕ್ತರಿಗೆ ಅವಕಾಶ

06:46 PM Jan 22, 2021 | Shreeraj Acharya |

ಸಾಗರ: ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದ ಶ್ರೀಕ್ಷೇತ್ರ ವರದಪುರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಜ.25ರಿಂದ ಮಧ್ಯಾಹ್ನ 2.30ರ ನಂತರ ಭಗವಾನ್‌ ಸದ್ಗುರು ಶ್ರೀಧರ ಸ್ವಾಮಿಗಳ ಸನ್ನಿಧಾನ ದರ್ಶನಕ್ಕೆ ಅವಕಾಶ ಕಲ್ಪಿಸಲು ತಾಲೂಕಿನ ಶ್ರೀ ಶ್ರೀಧರ ಸೇವಾ ಮಹಾಮಂಡಲ ನಿರ್ಧರಿಸಿದೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಮಹಾಮಂಡಲ, ಪ್ರತಿ ದಿನ ಮಧ್ಯಾಹ್ನ 2.30ರಿಂದ 5ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ರ ನಂತರ ಆಶ್ರಮದ ಪರಿಸರದಲ್ಲಿ ಸಿಬ್ಬಂದಿ ಮತ್ತು ಆಶ್ರಮವಾಸಿಗಳ ವಿನಃ ಸಾರ್ವಜನಿಕರ ಉಪಸ್ಥಿತಿಯನ್ನು ನಿಷೇ ಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ :  ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದ ಒಳಗಿನವರಿಗೆ ಆಶ್ರಮದ ಪ್ರವೇಶ ನಿರ್ಬಂಧಿ ಸಲಾಗಿದೆ. ಆಶ್ರಮಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಭೌತಿಕ ಅಂತರ ಕಾಪಾಡಬೇಕು. ಶ್ರೀಧರ ತೀರ್ಥದಲ್ಲಿ ಕೈಕಾಲು-ಮುಖ ತೊಳೆಯಲು ಮಾತ್ರ ಅವಕಾಶ ಇದೆ. ಸದ್ಯ ತೀರ್ಥಸ್ನಾನಕ್ಕೆ ಅವಕಾಶ ನೀಡಿಲ್ಲ. ಭಗವಾನರ ಸನ್ನಿಧಾನ ಮಂದಿರದ ಒಳಗೆ ಪ್ರವೇಶವಿರುವುದಿಲ್ಲ. ಮಂದಿರದ ಹೊರಗಿನಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂದಿರಕ್ಕೆ ಪ್ರದಕ್ಷಿಣೆ ಹಾಕುವುದು, ಮಂದಿರದ ಒಳಭಾಗದಲ್ಲಿ ಕುಳಿತುಕೊಳ್ಳುವುದು, ಭಜನೆ, ಸಂಗೀತ, ಜಪಾನುಷ್ಠಾನಗಳನ್ನು ತಾತ್ಕಾಲಿಕವಾಗಿ ನಿಷೇಧಿ ಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರದ ಆದೇಶದಂತೆ ತೀರ್ಥ-ಪ್ರಸಾದ, ಮಂತ್ರಾಕ್ಷತೆ ವಿನಿಯೋಗ, ಕಾಯಿ ಒಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವರದಪುರದಲ್ಲಿ ವಸತಿ ಮುಂತಾದ ವ್ಯವಸ್ಥೆಗಳು ಇರುವುದಿಲ್ಲ. ಆಶ್ರಮದಲ್ಲಿರುವ ಕಾರ್ಯಾಲಯದ ಸೇವೆಗಳು ಲಭ್ಯವಿರುವುದಿಲ್ಲ. ಭಕ್ತರು ತಮ್ಮ ಪಾದರಕ್ಷೆ ಮುಂತಾದ ವಸ್ತುಗಳನ್ನು ತಮ್ಮ ವಾಹನಗಳಲ್ಲೇ ಇಡತಕ್ಕದ್ದು. ಆಶ್ರಮದ ಆವರಣದಲ್ಲಿ ವಾಹನ ಪ್ರವೇಶವನ್ನು ಕಡ್ಡಾಯವಾಗಿ ನಿಷೇ ಧಿಸಲಾಗಿದೆ. ಆಶ್ರಮಕ್ಕೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್‌ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಆರೋಗ್ಯ ಸೇತು ಆ್ಯಪ್‌ ಹೊಂದಿರತಕ್ಕದ್ದು. ಆಧಾರ್‌ ಕಾರ್ಡ್‌ ತರತಕ್ಕದ್ದು ಹಾಗೂ ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು ಎಂದು ಶ್ರೀಧರ ಸೇವಾ ಮಹಾಮಂಡಲ ಷರತ್ತುಗಳನ್ನು ವಿಧಿಸಿದೆ.

Advertisement

ಕಳೆದ ವರ್ಷದ ಮಾ. 20ರಿಂದಲೇ ಕೊರೊನಾ ಹಿನ್ನೆಲೆಯಲ್ಲಿ ವರದಪುರದಲ್ಲಿ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಲವೆಡೆ ದೇವಾಲಯಗಳು ಆರಂಭಗೊಂಡಿದ್ದರೂ ಇಲ್ಲಿ ನಿರ್ಬಂಧ ಮುಂದುವರಿಸಲಾಗಿತ್ತು. ಸ್ಥಳೀಯರು ಹಾಗೂ ಪ್ರಭಾವಿಗಳಿಗೂ ಪ್ರವೇಶಾವಕಾಶ ಕೊಡದೆ ಅತಿ ಕಠಿಣವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಿರುವುದು ವಿಶೇಷ.

ಇದನ್ನೂ ಓದಿ : ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Advertisement

Udayavani is now on Telegram. Click here to join our channel and stay updated with the latest news.

Next