Advertisement

ಶಿವಮೊಗ್ಗದ ನೇರಲಗಿ ಕಾಡಿನಲ್ಲಿ ಯುವತಿ ಅನುಮಾನಾಸ್ಪದ ಸಾವು : ಕೊಲೆ ಶಂಕೆ

05:52 PM Aug 26, 2021 | Shreeraj Acharya |

ಶಿವಮೊಗ್ಗ :  ಜಿಲ್ಲೆಯ ಬೆಳ್ಳೂರು ಸಮೀಪದ ನೇರಲಗಿ ಕಾಡಿನಲ್ಲಿ ಯುವತಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಜೋಗ ಸಮೀಪದ ಗ್ರಾಮದ  ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಕವಿತಾ ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ. ಪ್ರೀತಿಯಲ್ಲಿ ಮೂಡಿದ ಅನುಮಾನದಂದಾಗಿ ತನ್ನ ಪ್ರಿಯಕರನಿಂದಲೇ ಕೊಲೆ ಮಾಡಿರಬಹುದು ಎನ್ನಾಲಾಗುತ್ತಿದೆ.

ಇದನ್ನೂ ಓದಿ : ಕಾಂಗ್ರೆಸ್ಸಿನವರು ನನ್ನನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ : ಆರಗ ಜ್ಞಾನೇಂದ್ರ

ಕಳೆದ ಏಳು ವರ್ಷದಿಂದ ಶಿವಮೂರ್ತಿ ಹಾಗೂ ಕವಿತಾ ಪ್ರೀತಿಸುತ್ತಿದ್ದರು. ನಿನ್ನೆ ಶಿವಮೂರ್ತಿ ಜೊತೆಗೆ ಆತನ ಗ್ರಾಮ ಬೆಳ್ಳೂರು ಸಮೀಪದ ಕಗ್ಗಲಿ ಜಡ್ಡು ಗ್ರಾಮಕ್ಕೆ ಬಂದಿದ್ದಳು‌. ಸಂಜೆ ಇಬ್ಬರೂ ಬೈಕ್ ನಲ್ಲಿ ನೇರಲಗಿ ಸಮೀಪದ ಹೊಸಕೆರೆಯ ಸಮೀಪದ ಕಾಡಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಶಿವಮೂರ್ತಿ ಕವಿತಾಳ ಕತ್ತನ್ನು ವೇಲಿನಿಂದ ಬಿಗಿದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕವಿತಾ ಇತ್ತೀಚೆಗೆ ಇನ್ನೊಬ್ಬನನ್ನು ಪ್ರೀತಿಸಲಾರಂಭಿಸಿದ್ದಳು ಎನ್ನಲಾಗಿದ್ದು, ಇದೇ ಕಾರಣದಿಂದ ಕವಿತಾಳನ್ನು ಕೊಂದು ಶಿವಮೂರ್ತಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಹೇಳಲಾಗುತ್ತಿದೆ.

Advertisement

ಇನ್ನು, ರಿಪ್ಪನ್ ಪೇಟೆಯಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಶಿವಮೂರ್ತಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ, ಆತನನ್ನು ಚಿಕಿತ್ಸೆಗಾಗಿ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಮೊಘಲರು ದುಷ್ಟರಲ್ಲ : ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next