Advertisement

Shivamogga: ಭದ್ರಾ ಜಲಾಶಯದ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

09:01 PM Aug 01, 2024 | Team Udayavani |

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಯಾಗಿದ್ದು ಬಾಗಿನ ಬಿಡುವುದು, ಜಲಾಶಯ ವೀಕ್ಷಣೆಗೆ ರೈತರು, ಸಾರ್ವಜನಿಕರು ಬರುತ್ತಿರುವುದರಿಂದ ಸುರಕ್ಷತೆಗೆ ಕಷ್ಟಸಾಧ್ಯವಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಒಂದು ತಿಂಗಳ ಕಾಲ ಜಲಾಶಯದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಿದೆ.

Advertisement

ಭದ್ರಾ ಜಲಾಶಯ ಭರ್ತಿಯಾಗಿರುವ ಕಾರಣ ಪ್ರತಿದಿನ ರೈತ ಮುಖಂಡರು, ಇತರರು ಬಾಗಿನ ಅರ್ಪಿಸಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ ಭದ್ರತೆಗೆ ಧಕ್ಕೆಯಾಗುತ್ತಿದ್ದು ನಿಷೇಧಾಜ್ಞೆ ವಿಧಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.

ಜಲಾಶಯದ ಮೇಲೆ ಹೋಗುವುದನ್ನು ಸಂಪೂರ್ಣ ನಿಷೇಧಿಸಿದೆ. ಬಲದಂಡೆ, ಎಡದಂಡೆ ಕಾಲುವೆಗಳಿಗೆ ಇಳಿಯುವುದನ್ನು, ಫೋಟೋ ತೆಗೆಯುವುದನ್ನು ನಿಷೇಧಿಸಿದೆ. ಜಲಾಶಯದ ಸೆಕ್ಯೂರಿಟಿ, ಸಿಬ್ಬಂದಿಗೆ ತೊಂದರೆ ಕೊಡಬಾರದು, ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಆದೇಶಿಸಲಾಗಿದೆ.

ಕೂಡಲಿಗೆ ನೆರೆ ಭೀತಿ, ಜಿಲ್ಲಾಡಳಿತ ಗಮನಹರಿಸಲಿ
ತುಂಗೆ, ಭದ್ರೆ ಸಂಗಮ ಸ್ಥಳದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲಾಡಳಿತ ಕೂಡಲಿ ಶೃಂಗೇರಿ ಪೀಠವಿರುವ ಗ್ರಾಮದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಮೊನ್ನೆ ಎರಡು ದಿನಗಳ ಪ್ರವಾಹದಿಂದ ಒಂದೂವರೆ ಲಕ್ಷ ಕ್ಯೂಸೆಕ್ಸ್ಗೆ ಅಧಿಕ ನೀರು ಬಿಡಲಾಗಿತ್ತು. ಇದರಿಂದ ಕೂಡಲಿಯ ಸ್ನಾನಘಟ್ಟದವರೆಗೂ ನೀರು ಬಂದಿತ್ತು. ಇನ್ನೂ ಎರಡು ತಿಂಗಳು ಮಳೆಗಾಲ ಇರುವುದರಿಂದ ಮತ್ತೆ ಪ್ರವಾಹ ಭೀತಿ ಇದೆ. ಕೂಡಲಿ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು ಗ್ರಾಮದಿಂದ ಹೊರಹೋಗಲು ಕೂಡಲಿ ಸರ್ಕಲ್ ಬಿಟ್ಟರೆ, ಪಿಳ್ಳಂಗೆರೆ ಮೂಲಕ ಮಾತ್ರ ರಸ್ತೆ ಇದೆ. ಏಕಾಏಕಿ ಪ್ರವಾಹ ಭೀತಿ ಎದುರಾದರೆ ಜನರನ್ನು ಶಿಫ್ಟ್ ಮಾಡುವುದು ಕಷ್ಟಸಾಧ್ಯ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಕೂಡಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next