Advertisement
ರಾಜ್ಯದಲ್ಲೇ ಅತಿ ಹೆಚ್ಚು ಸರಕಾರಿ ಭೂಮಿ ಸಾಗುವಳಿ, ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಇದೇ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಜಾಗಕ್ಕೆ ತೊಡಕಾಗಿದೆ.Related Articles
Advertisement
ಸ್ಮಶಾನದ ಇಂತಹ ಗಂಭೀರ ಸ್ಥಿತಿಯನ್ನು ಮನಗಂಡ ಸರಕಾರವು ಪ್ರತಿ ಗ್ರಾಮದಲ್ಲಿ ಕನಿಷ್ಠ ಎರಡು ಎಕರೆ ಸರಕಾರಿ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಟ್ಟು ಅಭಿವೃದ್ಧಿಪಡಿಸಲು ಅನುದಾನ ನೀಡುತ್ತಿದೆ. 394 ಗ್ರಾಮಗಳಲ್ಲಿ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. ಆದರೆ, ಇಲ್ಲಿ ಅರಣ್ಯ ಇಲಾಖೆ, ಅಕ್ರಮವಾಗಿ ಸಾಗುವಳಿ ಮಾಡಿಕೊಂಡವರು ಮತ್ತು ಇತರರ ನಡುವೆ ವ್ಯಾಜ್ಯದಿಂದಾಗಿ ಸಮಸ್ಯೆ ಬಗೆ ಹರಿದಿಲ್ಲ. ಸರಕಾರಿ ಭೂಮಿ ಇಲ್ಲವಾದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಮಶಾನ ನಿರ್ಮಿಸುವಂತೆ ಸರಕಾರ ಸೂಚನೆ ನೀಡಿದೆ. ಆದರೆ, ಸರಕಾರ ಕೊಡುವ ಸಾವಿರ ಲೆಕ್ಕದ ಮೊತ್ತಕ್ಕೆ ಲಕ್ಷಾಂತರ ರೂ. ಮೌಲ್ಯದ ಭೂಮಿ ಬಿಟ್ಟುಕೊಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಮಶಾನ ಇಲ್ಲದವರ ಗೋಳು ಅರಣ್ಯರೋದನವಾಗಿದೆ.
ಮನೆ ಹಿರಿಯರು ಅಥವಾ ಸದಸ್ಯರು ಮೃತಪಟ್ಟಾಗ ಅವರ ಅಗಲಿಕೆ ನೋವು ಕುಟುಂಬದವರನ್ನು ದುಃಖದಲ್ಲಿ ಮುಳುಗಿಸುವುದಲ್ಲದೆ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಸಬೇಕೆಂಬ ಚಿಂತೆ ಮನೆಯವರ ಜತೆಗೆ ಊರವರನ್ನು ಕಾಡುತ್ತದೆ. ಏಕೆಂದರೆ ಸತ್ತವರಿಗೆ ಮುಕ್ತಿ ದೊರಕಿಸಲು ಶಿವಮೊಗ್ಗ ಜಿಲ್ಲೆಯ 904 ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಈ ಊರುಗಳಲ್ಲಿ ಹೊಲ, ತೋಟ ಹೊಂದಿರುವವರ ಕುಟುಂಬದವರು ಮೃತಪಟ್ಟರೆ ಸಮಸ್ಯೆ ಇಲ್ಲ. ಆದರೆ, ತುಂಡು ಭೂಮಿಯೂ ಇಲ್ಲದವರ ಮನೆಯಲ್ಲಿ ಸಾವಾದಲ್ಲಿ ಸಮಸ್ಯೆ ಬೆನ್ನಿಗೆ ಬರುತ್ತದೆ.
ಸತ್ತವರಿಗೆ ಮುಕ್ತಿ ದೊರಕಿಸಲು ಊರಿಗೊಂದು ಸ್ಮಶಾನ ಇರಬೇಕು ಎಂಬ ಕಾರಣಕ್ಕೆ ಬಹಳ ಹಿಂದಿನಿಂದಲೂ ಪ್ರತಿ ಊರಲ್ಲಿ ಸ್ಮಶಾನ ಭೂಮಿ ಗುರುತಿಸಲಾಗುತ್ತಿತ್ತು. ಊರುಗಳು ಬೆಳೆದಂತೆ, ಹೊಸ ಹಳ್ಳಿಗಳು, ಬಡಾವಣೆಗಳಾದ ಬಳಿಕ ಮನೆಗಳು, ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತೇ ಹೊರತು ಸ್ಮಶಾನಕ್ಕೆ ಭೂಮಿ ಗುರುತಿಸಲಿಲ್ಲ. ಹೂಳ್ಳೋದಕ್ಕೆ ಮೂರು ಅಡಿ ಜಾಗ ಇಲ್ಲದ ಮೇಲೆ ಎಷ್ಟು ಆಸ್ತಿ ಅಡವು ಮಾಡಿ ಏನು ಬಂತು ಎಂದು ಹಿರಿಯರು ಹೇಳುವುದರ ಮಾತಿನ ಹಿಂದೆ ಸ್ಮಶಾನದ ಮಹತ್ವ ಅರಿವಾಗುತ್ತದೆ. ಸರಕಾರಿ ಭೂಮಿ, ಕಂದಾಯ ಭೂಮಿ, ಅರಣ್ಯ ಭೂಮಿಗಳನ್ನು ಸಾಗುವಳಿ ಭೂಮಿಗಳನ್ನಾಗಿ ಮಾಡಿಕೊಂಡರೆ ಹೊರತು ಸತ್ತವರಿಗೆ ಮುಕ್ತಿ ದೊರಕಿಸಲು ಸ್ಮಶಾನ ನಿರ್ಮಿಸಲಿಲ್ಲ. ಪರಿಣಾಮ ಈಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.
ಸರಕಾರ ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸರಕಾರಿ,ಅರಣ್ಯ ಭೂಮಿ ಗುರುತಿಸಿ ಸ್ಮಶಾನ ಅಭಿವೃದ್ಧಿಪಡಿಸುವಂತೆ ಹೇಳಿದೆ. ಆದರೆ, ಸರಕಾರಿ ಭೂಮಿ ಈಗಾಗಲೆ ಒತ್ತುವರಿಯಾದರೆ, ಅರಣ್ಯ ಭೂಮಿ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪುತ್ತಿಲ್ಲ. ಖಾಸಗಿ ಭೂಮಿಗೆ ಸರಕಾರದ ಬೆಲೆಗೆ ಕೊಡಲು ಯಾರೂ ಸಿದ್ಧರಿಲ್ಲ. ಸಮಸ್ಯೆ ಬಗೆಹರಿಸಲಾಗುವುದು.
ಕೆ.ಎ. ದಯಾನಂದ್, ಡಿಸಿ