Advertisement

ಒಕ್ಕಲಿಗರ ಸಂಘದ ಗದ್ದುಗೆಗಾಗಿ ಜಿದ್ದಾ ಜಿದ್ದಿ

05:23 PM Dec 07, 2021 | Adarsha |

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಒಕ್ಕಲಿಗರ ಸಂಘದರಾಜ್ಯ ನಿರ್ದೇಶಕ ಸ್ಥಾನದ ಚುನಾವಣೆ ಗರಿಗೆದರಿದ್ದುಅಧಿ ಕಾರ ಹಿಡಿಯಲು ಭದ್ರಾವತಿ- ತೀರ್ಥಹಳ್ಳಿಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

Advertisement

ಒಕ್ಕಲಿಗರ ಸಂಘದ ಚುನಾವಣೆಯು “ಗೌಡರಗದ್ದಲ’ ಎಂಬ ನಾಣ್ಣುಡಿ ನೆನಪಿಸುತ್ತದೆ. ಅನೇಕಬಾರಿ ಮುಂದೂಡಿ ಕೊನೆಗೂ ನಡೆಯುತ್ತಿರುವಚುನಾವಣೆಯು ಈ ಬಾರಿ ಹಲವು ವಿಶೇಷತೆಗಳನ್ನುಒಳಗೊಂಡಿದೆ.

ಶಿವಮೊಗ್ಗ ಮತ್ತು ಉತ್ತರ ಕನ್ನಡಜಿಲ್ಲೆ ಒಳಗೊಂಡ ಈ ಕ್ಷೇತ್ರದಲ್ಲಿ ಮೊದಲಿನಿಂದಲೂತೀರ್ಥಹಳ್ಳಿ ಮಲೆನಾಡು ಗೌಡರ ಪಾರುಪತ್ಯ ಹೆಚ್ಚು.ಮತ ಕ್ಷೇತ್ರದಲ್ಲಿ ತೀರ್ಥಹಳ್ಳಿ, ಭದ್ರಾವತಿಯಲ್ಲಿಹೆಚ್ಚು ಮತದಾರರು ಇದ್ದಾರೆ. ಶಿವಮೊಗ್ಗ ನಂತರದಸ್ಥಾನದಲ್ಲಿದೆ. ಕಳೆದ ಎರಡು ಅವ ಧಿಗೆ ಅಧ್ಯಕ್ಷರಾಗಿದ್ದಡಿ.ವಿ. ರಮೇಶ್‌ ಅವರು ಈ ಬಾರಿ ಕಣದಿಂದದೂರ ಉಳಿದಿದ್ದಾರೆ.

ಹಾಗಾಗಿ ಆಕಾಂಕ್ಷಿಗಳಪಟ್ಟಿಯೂ ಬೆಳೆದಿದಿದೆ. ಕಣದಲ್ಲಿ 9 ಮಂದಿಅಭ್ಯರ್ಥಿಗಳಿದ್ದು ಮೂವರು ಅಭ್ಯರ್ಥಿಗಳ ಹೆಸರುಮುಂಚೂಣಿಯಲ್ಲಿದೆ.9 ಮಂದಿಯಲ್ಲಿ ರಜನಿಕಾಂತ, ಕೆ.ಎಸ್‌.ರವಿಕುಮಾರ್‌ ಶಿವಮೊಗ್ಗದವರಾಗಿದ್ದರೆ ಶಶಿಧರಎಚ್‌.ಡಿ., ಎಸ್‌.ಕೆ.ಧರ್ಮೇಶ್‌, ಚೇತನ ಹೆಗ್ಡೆ,ಲೋಕೇಶ್‌ ಎಸ್‌.ವಿ., ಕುಮಾರ್‌ ತೀರ್ಥಹಳ್ಳಿತಾಲೂಕಿನವರು. ಭದ್ರಾವತಿ ತಾಲೂಕಿನಿಂದ ಎಸ್‌.ಕುಮಾರ್‌, ನಾಗರಾಜ ಟಿ.ಎನ್‌. ಕಣದಲ್ಲಿದ್ದಾರೆ.

ಬಲಾಬಲ: ಭದ್ರಾವತಿ ತಾಲೂಕಿನಿಂದ ಈಬಾರಿ ಒಮ್ಮತದ ಅಭ್ಯರ್ಥಿಯಾಗಿ ಜಿಪಂ ಮಾಜಿಸದಸ್ಯ ಎಸ್‌. ಕುಮಾರ್‌ ಅವರು ಕಣಕ್ಕಿಳಿದಿದ್ದುಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಮಾಜಿ ಶಾಸಕದಿ.ಎಂ.ಜೆ. ಅಪ್ಪಾಜಿ ಒಡನಾಡಿಯಾಗಿರುವಇವರು ಕ್ಷೇತ್ರದಾದ್ಯಂತ ಓಡಾಡುತ್ತಿದ್ದು ಪ್ರಬಲಪೈಪೋಟಿ ಒಡ್ಡಿದ್ದಾರೆ. ಇವರಿಗೆ ಪ್ರಬಲ ಪೈಪೋಟಿಒಡ್ಡಿರುವುದು ತೀರ್ಥಹಳ್ಳಿಯ ಎಸ್‌.ಕೆ.ಧರ್ಮೇಶ್‌. ಅವರು ವೃತ್ತಿಯಿಂದ ಕಾಂಟ್ರಾ Âಕ್ಟರ್‌ಆಗಿದ್ದು ಕ್ಷೇತ್ರದಲ್ಲಿ ಪರಿಚಯ ಹೊಂದಿದ್ದಾರೆ.

Advertisement

ಚುನಾವಣೆಗಾಗಿಯೇ ಒಂದು ವರ್ಷದಿಂದತಯಾರಿ ನಡೆಸಿದ್ದಾರೆ. 20 ವರ್ಷದಿಂದ ಸಮಾಜದಕೆಲಸದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಹೆಚ್ಚುಮತ ಪಡೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.ಇವರಿಬ್ಬರ ನಡುವೆ ವೃತ್ತಿಯಿಂದ ವಕೀಲರಾಗಿರುವಎಸ್‌.ವಿ. ಲೋಕೇಶ್‌ ಅವರು ಹೆಸರು ಸ್ಪರ್ಧಾಕಣದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಮಲೆನಾಡುಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವ ಅವರು ಹೆಚ್ಚುಮತ ಪಡೆಯುತ್ತಾರೆಂಬ ನಿರೀಕ್ಷೆ ಇದೆ. ಉಳಿದಂತೆಶಿವಮೊಗ್ಗದ ಕೆ.ಎಸ್‌. ರವಿಕುಮಾರ್‌ ಭ್ರಷ್ಟಾಚಾರರಹಿತ ಆಡಳಿತ ನೀಡುವ ಭರವಸೆ ಮೇಲೆ ಮತಕೇಳುತ್ತಿದ್ದಾರೆ.ಒಟ್ಟಾರೆ ಚುನಾವಣೆಯಲ್ಲಿ ಹಣ, ಬಾಡೂಟದಕತೆಗಳು ಕೇಳಿಬರುತ್ತಿವೆ. ಹಣ ಬಲ ಗೆಲ್ಲುವುದೋ,ಜನ ಬಲ ಗೆಲ್ಲುವುದೋ ಕಾದು ನೋಡಬೇಕಿದೆ.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next