Advertisement

ಪುನೀತ್‌ ಅಗಲಿಕೆ ಅತಿದೊಡ್ಡ ನಷ್ಟ: ರಮೇಶ್‌ ಅರವಿಂದ್‌

08:38 PM Nov 08, 2021 | Adarsha |

ಶಿವಮೊಗ್ಗ: ಪುನೀತ್‌ ರಾಜಕುಮಾರ್‌ ಅವರನ್ನು ಕಳೆದುಕೊಂಡು ಅತಿದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ ಎಂದು ನಟ ರಮೇಶ್‌ ಅರವಿಂದ್‌ ಹೇಳಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಭಾನುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಅವರು ಮಾತನಾಡಿ, ಎಲ್ಲರಿಗೂ ಪುನೀತ್‌ ಅವರೊಂದಿಗೆ ನೆನಪುಗಳಿವೆ. ಅಪ್ಪುಗೆ ನಮನ ಸಲ್ಲಿಸುವ ಉದ್ದೇಶದಿಂದ ನ.16ರಂದು ಚಲನಚಿತ್ರವಾಣಿಜ್ಯ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

Advertisement

ತಮ್ಮ ನೂತನ ಚಿತ್ರ “ಹಂಡ್ರೆಡ್‌'(100) ಟ್ರೇಲರ್‌ ಬಿಡುಗಡೆಯಾಗಿದೆ. ನ.19ರಂದು ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣ ಮತ್ತು ಮೊಬೈಲ್‌ ಬಳಕೆ ಕುರಿತ ಕೌಟುಂಬಿಕ ಥ್ರಿಲ್ಲರ್‌ ಸಿನಿಮಾ ಇದು. ನಟಿ ರಚಿತಾರಾಮ್‌, ಪೂರ್ಣಾ ಸೇರಿದಂತೆ ತಂತ್ರಜ್ಞರದೊಡ್ಡ ತಂಡವೇ ನಮ್ಮೊಂದಿಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next