Advertisement

ವೈಯಕ್ತಿಕ ಟೀಕೆ- ಟಿಪ್ಪಣಿ ಬಿಡಬೇಕಿದೆ: ಈಶ್ವರಪ್ಪ

01:21 PM Oct 29, 2021 | Team Udayavani |

ಶಿವಮೊಗ್ಗ: ಐದು ಲಕ್ಷಕ್ಕೂ ಹೆಚ್ಚು ಜನ ಸೇರಿ ಮೂರು ವಿಶೇಷಕನ್ನಡದ ಹಾಡುಗಳನ್ನು ಸಾಮೂಹಿಕವಾಗಿ ಹಾಡಿದ್ದಾರೆ. ಇದುಕರ್ನಾಟಕದಲ್ಲೇ ಐತಿಹಾಸಿಕ ದಿನ. ಇದಕ್ಕಾಗಿ ಸಚಿವ ಸುನಿಲ್‌ಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆಮಾತನಾಡಿದ ಅವರು, ಚುನಾವಣಾಸೋಲಿನ ಭೀತಿ ಕಾಂಗ್ರೆಸ್ಸಿಗರಿಗೆಕಾಡುತ್ತಿದೆ. ಹೀಗಾಗಿ ಏನೇನೋಆರೋಪ ಮಾಡುತ್ತಿದ್ದಾರೆ.

Advertisement

ಈ ಚುನಾವಣೆಯಲ್ಲಿಎಲ್ಲ ರಾಜಕಾರಣಿಗಳುನಾವು ರಾಜ್ಯದ ಜನರ ಪ್ರತಿನಿಧಿಗಳುಎಂದು ನೆನಪಿಟ್ಟುಕೊಳ್ಳಬೇಕಿತ್ತು. ರಾಜ್ಯದ ಜನರ ಎದುರುನಾವು ದಿನೇ ದಿನೇ ಚಿಕ್ಕವರಾಗುತ್ತಿದ್ದೇವೆ. ಇದು ಸರಿಯಲ್ಲ.ನಾವೇನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿ ಮತಕೇಳಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಸರಿಯಲ್ಲ.ಅಶ್ಲೀಲ ಪದಗಳ ಬಳಕೆಯೂ ಹೆಚ್ಚಾಗಿದೆ.

ಇದರಿಂದನಾನು ನೊಂದಿದ್ದೇನೆ ಎಂದರು. ನಾನು ಸೇರಿದಂತೆ ಎಲ್ಲರೂವೈಯಕ್ತಿಕಟೀಕೆ ಮಾಡುವುದನ್ನು ಬಿಡಬೇಕಿದೆ. ವೈಯಕ್ತಿಕಟೀಕೆಮಾಡದಂತೆ ತಡೆಯಲು ಕಾನೂನು ರೂಪಿಸಲು ಸಾಧ್ಯವಿಲ್ಲ.ಆದರೆ ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಅವರೇ ಉತ್ತರನೀಡುತ್ತಾರೆ. ತಾಲೂಕು ಹಾಗೂ ಜಿಪಂ ಚುನಾವಣೆ ನಡೆಸಲುಸಿದ್ಧತೆ ನಡೆದಿದೆ.

ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿನಾವೇ ಗೆಲುವು ಸಾಧಿಸುತ್ತೇವೆ. ಎರಡು ಕ್ಷೇತ್ರದಲ್ಲೂ 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಕಾಂಗ್ರೆಸ್‌ನವರುಜಾತಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನಮಗೆ ದುಡ್ಡುಹಂಚುತ್ತಿದ್ದಾರೆ ಎನ್ನುತ್ತಾರೆ. ಆದರೆ ಅವರೇ ಹೆಚ್ಚು ದುಡ್ಡುಹಂಚುತ್ತಿದ್ದಾರೆ. ಜಗಜೀವನ್‌ ರಾಮ್‌ ಮಿಷನ್‌ ಅಡಿ ನೀರುಬಳಕೆಗೆ ಮೀಟರ್‌ ಹಾಕಲಾಗುತ್ತದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

ಎಷ್ಟು ನೀರು ಖರ್ಚಾಗಿದೆ ಎಂದುತಿಳಿಯಲು ಮೀಟರ್‌ ಅಳವಡಿಸಲು ತೀರ್ಮಾನಿಸಿದ್ದೇವೆ.ಮನೆ- ಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ನೀರುಕೊಡುತ್ತೇವೆ. ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಪೆಟ್ರೋಲ್‌ಬೆಲೆ ಹೆಚ್ಚಾಗಿತ್ತು. ಈಗಲೂ ಪೆಟ್ರೋಲ್‌ ಬೆಲೆ ಹೆಚ್ಚಾಗುತ್ತಿದೆ.ಪೆಟ್ರೋಲ್‌ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next