Advertisement

ಹರ್ಷ-ವಿಶ್ವನಾಥ ಶೆಟ್ಟಿನಿವಾಸಕ್ಕೆ ಶ್ರೀಕಾಂತ್‌ ಭೇಟಿ

01:48 PM Feb 27, 2022 | Team Udayavani |

ಶಿವಮೊಗ್ಗ: ಮೃತ ಹರ್ಷನ ಮನೆಗೆ ಶನಿವಾರ ಜೆಡಿಎಸ್‌ ನಾಯಕ ಎಂ. ಶ್ರೀಕಾಂತ್‌ ಭೇಟಿನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯತುಂಬಿದರು. ಹಾಗೆಯೇ 2015ರಲ್ಲಿ ಪಿಎಫ್‌ಐಕಾರ್ಯಕರ್ತರಿಂದ ಹತ್ಯೆಗೀಡಾದ ವಿಶ್ವನಾಥ್‌ ಶೆಟ್ಟಿಅವರ ನಿವಾಸಕ್ಕೆ ತೆರಳಿ ಅವರ ತಾಯಿಗೆ ಧೈರ್ಯತುಂಬಿದರು.

Advertisement

ಆ ತಾಯಿ ವಿಶ್ವನಾಥ್‌ ಶೆಟ್ಟಿ ಹತ್ಯೆನಂತರ ಪತಿ ಹಾಗೂ ಸೊಸೆಯನ್ನು ಕೂಡಕಳೆದುಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಚಿಂದಿ ಆಯ್ದು ಮೊಮ್ಮಗನ ವಿದ್ಯಾಭ್ಯಾಸಮಾಡಿಸುತ್ತಿದ್ದಾರೆ. ಈ ನಡುವೆ ಅವರ ಮನೆಗೆಕಳೆದ 3 ವರ್ಷಗಳಿಂದ ವಿದ್ಯುತ್‌ ಸಂಪರ್ಕ ಸಹಕಡಿತಗೊಳಿಸಲಾಗಿದೆ. ಜೊತೆಗೆ ನೀರಿನ ಸಂಪರ್ಕವೂಸಮರ್ಪಕವಾಗಿಲ್ಲ.

ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಎಂ. ಶ್ರೀಕಾಂತ್‌ ತಕ್ಷಣಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಕರೆಯಿಸಿಕೊಂಡು ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next