Advertisement

ಸಮರ್ಪಕ ಕುಡಿವ ನೀರು ಪೂರೈಸಲು ಒತ್ತಾಯ

12:09 PM Jun 05, 2019 | Naveen |

ಶಿವಮೊಗ್ಗ: ನಗರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಅತಿ ಹೆಚ್ಚಾಗಿದ್ದು, ಜನರ ಪರಿತಾಪ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಕುಡಿಯುವ ನೀರು ಒದಗಿಸದ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಜವಾಬ್ದಾರಿ ಹೊತ್ತಿರುವ ನೀರಾವರಿ ಇಲಾಖೆಗೆ ಸೂಕ್ತ ಸೂಚನೆ ನೀಡಿ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಭಾರತೀಯ ಮಾನವ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಕೆ.ನಾಗರಾಜ್‌ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಶಿವಮೊಗ್ಗ ವಿನೊಬಗರ ವ್ಯಾಪ್ತಿಯ ಆದರ್ಶ ಕಾಲೋನಿ, ಕೆ.ಎಚ್.ಬಿ. ಕಾಲೋನಿ, ತಿಮ್ಮಕ್ಕ ಲೇ-ಔಟ್, ಚೆನ್ನಪ್ಪ ಲೇ ಔಟ್ ಹಾಗೂ 100 ಅಡಿ ರಸ್ತೆಯ ವಿನಾಯಕ ನಗರ, ಸರಸ್ವತಿ ನಗರ ಸೇರಿದಂತೆ ಹಲವೆಡೆ ನಿತ್ಯ ಸಕಾಲದಲ್ಲಿ ನೀರು ಪೂರೈಸುತ್ತಿಲ್ಲ. ಇಲ್ಲಿ ಕನಿಷ್ಠ 2ರಿಂದ 3ದಿನಕ್ಕೊಮ್ಮೆ ಇಷ್ಟ ಬಂದಂತಹ ಸಮಯದಲ್ಲಿ ಕೇವಲ 10ರಿಂದ 15 ನಿಮಿಷ ನೀರು ಬಿಟ್ಟು ಇಡಿ ಬೀದಿಯ ಜನ ಮನೆಯ ನೆಲ್ಲಿಯಲ್ಲಿ ನೀರು ಬಾರದ ಕಾರಣ ಬೀದಿ ನಲ್ಲಿಗಳ ಬಳಿ ಕಾದಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗದೆ ಎಂದು ಆರೋಪಿಸಿದೆ.

ಪ್ರತಿನಿತ್ಯ ನೀರಿಗಾಗಿ ಪರಿತಪಿಸುವ ಈ ಸಮಸ್ಯೆಯನ್ನು ತಾವು ಖುದ್ದು ಸ್ಥಳಕ್ಕೆ ಭೇಟಿ ನೀಡಿ ನೋಡಬಹುದಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಪಷ್ಟ ಸೂಚನೆ ನೀಡಲು ಸಮಿತಿ ಒತ್ತಾಯಿಸಿದೆ. ಆದರ್ಶ ಕಾಲೋನಿಯಲ್ಲಂತೂ ನೀರು ಸರಬರಾಜು ಮಾಡುವ ಕೆಲಸಗಾರ ಸಾರ್ವಜನಿಕರ ಮಾತಿಗೆ ತಾತ್ಸರದ ಮಾತನಾಡುತ್ತಾ ದುರಂಹಕಾರದ ವರ್ತನೆ ತೋರುತ್ತಿದ್ದಾರೆ. ಇದು ಹಲವು ಭಾರಿ ಜನಗಳದ ಸ್ವರೂಪಕ್ಕೆ ತಿರುಗಿದೆ. ಈ ಕಾರಣದಿಂದಲೇ ಇಲ್ಲಿ ನೀರು ಬಿಡುವ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಹಾಗೆಯೇ ಇದೇ ವ್ಯಕ್ತಿ ಇಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ನೇರ ಸಂಪರ್ಕದಿಂದ ನೀರು ಕೊಡುವ ಕೆಲಸವೂ ನಡೆಯುತ್ತಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.

ಸಮಿತಿ ಅಧ್ಯಕ್ಷ ಕೆ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ ವೀರೇಶ್‌ ಚಿತ್ರರಗಿ, ಪ್ರಮುಖರಾದ ಕೃಷ್ಣಪ್ಪ, ಪ್ರಶಾಂತ್‌ ಬಿ.ಟಿ., ಕರಿಬಸಪ್ಪ, ರಮೇಶ್‌. ವೆಂಕಟೇಶ್‌, ಎಚ್.ಕೆ. ಕುಮಾರ್‌, ಕೃಷ್ಣಮೂರ್ತಿ ನಿರಂಜನಮೂರ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next