Advertisement

ಹರ್ಷ ಹತ್ಯೆಯ ತನಿಖೆಗೆ ಮತ್ತಷ್ಟು ಪೊಲೀಸ್‌ ಬಲ

05:15 PM Mar 02, 2022 | Adarsha |

ಶಿವಮೊಗ್ಗ: ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷಕೊಲೆ ಪ್ರಕರಣದ ತನಿಖೆಗೆ ಈಗ ಮತ್ತಷ್ಟು ಬಲ ಬಂದಿದೆ.ಶಿವಮೊಗ್ಗ ಪೊಲೀಸರ ಜತೆ ಬೆಂಗಳೂರಿನ ವಿಶೇಷ ತನಿಖಾತಂಡ ಕೈ ಜೋಡಿಸಿದೆ.

Advertisement

ಇದುವರೆಗೆ ಸ್ಥಳೀಯ ಪೊಲೀಸರು ಮಾತ್ರ ತನಿಖೆನಡೆಸುತ್ತಿದ್ದರು.ಈ ಹಿಂದೆ ಎನ್‌ಐಎ ಈ ಪ್ರಕರಣದತನಿಖೆ ಮಾಡಬೇಕೆಂದು ಸಚಿವಕೆ.ಎಸ್‌. ಈಶ್ವರಪ್ಪ ಒತ್ತಾಯಿಸಿದ್ದರು.ಅದರ ಹೊರತಾಗಿ ಶಿವಮೊಗ್ಗದಲ್ಲಿಗೊಂದಲದ ವಾತಾವರಣನಿರ್ಮಾಣವಾದ ಹಿನ್ನೆಲೆಯಲ್ಲಿಇದೀಗ ಬೆಂಗಳೂರಿನ ತನಿಖಾತಂಡ ಶಿವಮೊಗ್ಗ ತಂಡದ ಜತೆತನಿಖೆ ಆರಂಭಿಸಿದೆ.

ಈಗಾಗಲೇ 10 ಆರೋಪಿಗಳನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರಿಗೆ ಹೆಚ್ಚಿನ ತನಿಖೆ ಕೈಗೊಳ್ಳಲುಬೆಂಗಳೂರಿನ ವಿಶೇಷ ತನಿಖಾ ತಂಡ ಪೂರಕವಾಗಿ ಕೆಲಸಮಾಡುತ್ತಿದೆ. ಹತ್ಯೆ ಹಿಂದೆ ಕೆಲ ಸಂಘಟನೆಗಳ ಅಥವಾ ಪ್ರಭಾವಿವ್ಯಕ್ತಿಗಳ ಬೆಂಬಲ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಅದೇಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next