Advertisement

ಶಿವಮೊಗ್ಗ: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ… ರೌಡಿಶೀಟರ್ ಕಾಲಿಗೆ ಗುಂಡೇಟು…

07:28 PM Jul 03, 2023 | Team Udayavani |

ಶಿವಮೊಗ್ಗ: ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ಸೋಮವಾರ ನಡೆದಿದೆ.

Advertisement

ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ಗಾಯಗೊಂಡ ರೌಡಿಶೀಟರ್.

ಘಟನೆ ವಿವರ : ಹಲವು ಅಪರಾಧ ಪ್ರಕರಣಕ್ಕೆ ಬೇಕಾಗಿದ್ದ ರೌಡಿಶೀಟರ್ ಸೈಫುಲ್ಲಾ ಖಾನ್ ನನ್ನು ಜಯನಗರ ಠಾಣೆಯ ಕೇಸ್ 307 ಅಡಿಯಲ್ಲಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ, ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ, ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ ಪಿಎಸ್ಐ ನವೀನ್, ಅದಕ್ಕೂ ಜಗ್ಗದ ರೌಡಿಶೀಟರ್ ಮತ್ತೆ ಪೊಲೀಸ್ ಸಿಬಂದಿಯ ಮೇಲೆ ದಾಳಿಗೆ ಮುಂದಾಗಿದ್ದಾನೆ ಈ ವೇಳೆ ಪಿಎಸ್ಐ ನವೀನ್ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳು ಸೈಫುನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೌಡಿ ಶೀಟರ್ ಸೈಪು ಮೇಲೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯೊಂದರಲ್ಲೇ 16 ಕೇಸ್ ದಾಖಲಾಗಿದ್ದು, ತುಂಗಾನಗರ ಹಾಗೂ ಜಯನಗರ ಠಾಣೆಯಲ್ಲಿ ತಲಾ ಒಂದು ಕೇಸ್ ದಾಖಲಾಗಿದೆ.

Advertisement

ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಗುಚಿ ಬಿತ್ತು 25 ಮಹಿಳೆಯರಿದ್ದ ಬೋಟ್; ಕೇರಳದ ಅಲೆಪ್ಪಿಯ ದೋಣಿ ಸ್ಪರ್ಧೆಯಲ್ಲಿ ದುರ್ಘಟನೆ 

Advertisement

Udayavani is now on Telegram. Click here to join our channel and stay updated with the latest news.

Next