Advertisement

ಶರಾವತಿ ಉಳಿವಿಗಾಗಿ ಇಂದು ಶಿವಮೊಗ್ಗ ಬಂದ್‌

10:59 PM Jul 09, 2019 | Team Udayavani |

ಶಿವಮೊಗ್ಗ: ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೆಚ್ಚಿದ್ದು ಬುಧವಾರ ಶಿವಮೊಗ್ಗ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ. ಶರಾವತಿ ಉಳಿಸಿ ಹೋರಾಟದ ಅಂಗವಾಗಿ ಬುಧವಾರ ಕರೆ ಕೊಟ್ಟಿರುವ ಬಂದ್‌ಗೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

Advertisement

280ಕ್ಕೂ ಹೆಚ್ಚು ಸಂಘಟನೆಗಳು ಸ್ವಯಂಪ್ರೇರಿತವಾಗಿ ಬೆಂಬಲ ಘೋಷಿಸಿದ್ದು ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಬಗ್ಗೆ ಸರಕಾರ ಚಿಂತನೆ ನಡೆಸಿತ್ತು. ಈ ಬಗ್ಗೆ ಡಿಪಿಆರ್‌ ಸಿದ್ಧಪಡಿಸಲು ಡಿಸಿಎಂ ಪರಮೇಶ್ವರ್‌ ಸೂಚನೆ ನೀಡಿದ್ದರು. ಅಂದಿನಿಂದ ಹಂತಹಂತವಾಗಿ ಹೋರಾಟ ಆರಂಭಗೊಂಡಿತ್ತು.

ನೂರಾರು ಸಂಘಟನೆಗಳು ಜಿಲ್ಲಾ , ತಾಲೂಕು ಮಟ್ಟದಲ್ಲಿ ಪ್ರತಿಭಟನೆ, ಮನವಿ, ಜಾಗೃತಿ ಮೂಡಿಸುವ ಕೆಲಸ ಮಾಡಿದ್ದವು. ಹೋರಾಟದ ಭಾಗವಾಗಿ ಬಂದ್‌ಗೆ ಕರೆ ನೀಡಲಾಗಿದ್ದು, ಸಂಘಟನೆಗಳ ಜತೆಗೆ ಎಲ್ಲ ಪಕ್ಷಗಳು, ಸಂಸ್ಥೆಗಳು ಸಹ ಹೋರಾಟವನ್ನು ಬೆಂಬಲಿಸಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತುರ್ತು ಅಗತ್ಯಗಳು ಹೊರತುಪಡಿಸಿ ಎಲ್ಲ ಸೇವೆಗಳು ಬಂದ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next