Advertisement

ಮೈದುಂಬಿದ ತುಂಗೆಗೆ ಸಚಿವ ಈಶ್ವರಪ್ಪ ಬಾಗಿನ

10:08 PM Jun 24, 2021 | Shreeraj Acharya |

ಶಿವಮೊಗ್ಗ: ಗಾಜನೂರು ತುಂಗಾ ಜಲಾಶಯದಲ್ಲಿ ಬುಧವಾರ ಮೈದುಂಬಿದ ತುಂಗೆಗೆ ಸಚಿವ ಕೆ.ಎಸ್‌.ಈಶ್ವರಪ್ಪ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ. ರೈತರೆಲ್ಲರೂ ಸಂತಸದಿಂದ ಇದ್ದಾರೆ.

Advertisement

ಕಳೆದ ಮಳೆಗೆ ಗಾಜನೂರು ಜಲಾಶಯ ಮೂರು ಬಾರಿ ತುಂಬಿದೆ. ಇದು ಕುಡಿಯುವ ನೀರಿನ ಪೂರೈಕೆಗೆ ಆಧಾರವಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ನದಿಗಳು ತುಂಬುತ್ತಿದ್ದಂತೆಯೇ ಕೊರೊನಾ ಕೂಡ ಇಳಿಕೆಯಾಗುತ್ತಿದೆ. ಇದು ಸಂತೋಷದ ವಿಷಯ ಎಂದರು. ಹಾಗೆಯೇ, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲು ಅನೇಕ ಕ್ರಮ ಕೈಗೊಂಡಿದೆ.

ದಕ್ಷಿಣ ಭಾರತದಲ್ಲಿ ಲಸಿಕೆ ಹಾಕಿಸುವಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ, ಜಿಲ್ಲೆ ಸುಭಿಕ್ಷವಾಗಿದ್ದು, ಎಲ್ಲಾ ರೀತಿಯ ಸಂಕಷ್ಟ ನಿವಾರಣೆಯಾಗಲಿವೆ ಎಂದರು. ಮಹಾನಗರ ಪಾಲಿಕೆ ಮೇಯರ್‌ ಸುನಿತಾ ಅಣ್ಣಪ್ಪ ಅವರು ಮಾತನಾಡಿ, ಶಿವಮೊಗ್ಗ ನಗರದ ಜನರಿಗೆ ಕುಡಿಯುವ ನೀರಿನ ಮೂಲವಾಗಿರುವ ತುಂಗೆ ನಗರದ ಜನರಿಗೆ ಯಾವುದೇ ಹಾನಿ ಮಾಡದಂತೆ, ಅಗತ್ಯಕ್ಕೆ ನೀರುಣಿಸಿ, ದಾಹ ತಣಿಸುವಂತೆ ಪ್ರಾರ್ಥಿಸಿ ಬಾಗಿನ ಅರ್ಪಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಯಲಕ್ಷೀ¾ ಈಶ್ವರಪ್ಪ, ಉಪ ಮೇಯರ್‌ ಶಂಕರ್‌ ಗನ್ನಿ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next