Advertisement

ಸಮಾಜದ ಒಳಿತಿಗೆ ಬ್ರಾಹ್ಮಣರ ಕೊಡುಗೆ ಅಪಾರ

10:51 PM Jun 17, 2021 | Shreeraj Acharya |

ಸಾಗರ: ಪುರಾಣ ಕಾಲದಿಂದಲೂ ಸಮಾಜದ ಒಳಿತಿಗಾಗಿ ಬ್ರಾಹ್ಮಣರು ಗುರುತರವಾದ ಕೊಡುಗೆ ನೀಡುತ್ತ ಬಂದಿದ್ದಾರೆ. ಅವುಗಳನ್ನು ಪರಿಗಣಿಸದೆ ಏಕಾಏಕಿ ಅವರ ವಿರುದ್ಧ ಅಶಾಂತಿ ಮೂಡಿಸುವ ಕೆಲಸ ಯಾರಿಂದಲೂ ಆಗಬಾರದು ಎಂದು ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಗಾಂ ಧಿ ನಗರದ ಗೌತಮ ಸಭಾಂಗಣದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಸಾಗರ ತಾಲೂಕು ಬ್ರಾಹ್ಮಣ ಸಂಘ, ವಿಪ್ರ ನೌಕರರ ಸಂಘ, ವಿಪ್ರ ವೈದಿಕ ಪರಿಷತ್‌, ಜೋಶಿ ಫೌಂಡೇಷನ್‌, ಸಾಗರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಲೋಕಕಲ್ಯಾಣಾರ್ಥ ಏರ್ಪಡಿಸಿದ್ದ ರುದ್ರ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಚಾರ ಗಿಟ್ಟಿಸುವ ದೃಷ್ಟಿಯಿಂದ ಮತ್ತೂಬ್ಬರನ್ನು ಹೀನಾಯವಾಗಿ ದೂಷಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಪರಸ್ಪರರಲ್ಲಿ ದ್ವೇಷ ಹುಟ್ಟುಹಾಕಿ ಜನಸಾಮಾನ್ಯರ ಸಂಕಷ್ಟ ಹೆಚ್ಚಿಸುವಂತೆ ಮಾಡುತ್ತದೆ. ಸ್ವಜಾತಿ, ಧರ್ಮವನ್ನು ಪ್ರೀತಿಸುವುದು ತಪ್ಪಲ್ಲ. ಆದರೆ ಇತರರನ್ನು ಕೊಂಕಿಲ್ಲದೆ ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ಸಮಾಜ ಹೆಚ್ಚು ಆರೋಗ್ಯಕರವಾಗಿರುತ್ತದೆ ಎಂದರು.

ಬ್ರಾಹ್ಮಣ ಸಮುದಾಯ ರುದ್ರ ಪಾರಾಯಣದಂತಹ ಧಾರ್ಮಿಕ ಚಟುವಟಿಕೆ ನಡೆಸುವುದರ ಹಿಂದೆಯೂ ಈ ಕೊರೊನಾ ಸೋಂಕಿನ ಕಾಲದಲ್ಲಿ ಇಡೀ ಮಾನವ ಸಮುದಾಯಕ್ಕೆ ಒಳಿತಾಗಲಿ ಎಂಬ ಆಶಯವೇ ಅಡಗಿದೆ. ಜಗತ್ತಿನ ಎಲ್ಲ ಜಾತಿ, ಧರ್ಮ, ಪರಂಪರೆಗಳು ಸರ್ವರ ಹಿತವನ್ನೇ ಬಯಸಿವೆ. ಆದರೆ ಆಚರಣೆಯಲ್ಲಿ ಸೋಲುವ ನಾವು ದ್ವೇಷ, ನಾಶದ ಮನೋಭಾವ ಪ್ರದರ್ಶಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಾಹ್ಮಣ ಮಹಾಸಭಾ ರಾಜ್ಯ ಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿ ಅವರು ಈಶ್ವರಪ್ಪ ಅವರಿಗೆ ತಮ್ಮ ಆತ್ಮಕಥನದ ಪುಸ್ತಕ ನೀಡಿ ಮಾತನಾಡಿ, ಸಮಾಜದಲ್ಲಿ ಕೆಲವು ವೃತ್ತಿಗಳು ಹೆಚ್ಚಿನ ತ್ಯಾಗ ಬಯಸುತ್ತವೆ. ಓರ್ವ ಗುಮಾಸ್ತ, ಗಾರ್ಮೆಂಟ್‌ ನೌಕರರಂತಹವರಿಗೆ ಕೆಲಸದ ಸಮಯದ ನಂತರ ಸಿಗುವ ಸ್ವಾತಂತ್ರÂ ಅರ್ಚಕ, ಪುರೋಹಿತರಿಗೆ, ಶಿಕ್ಷಕರಿಗೆ ಸಿಗುವುದಿಲ್ಲ.

Advertisement

ಅವರು ಕಾನೂನುಬದ್ಧವಾಗಿಯಷ್ಟೇ ಅಲ್ಲ, ನೈತಿಕತೆಯ, ಸಭ್ಯತೆಯ ಎಲ್ಲೆ ಮೀರುವಂತಿರಬಾರದು. ಅವರು ಮಾಡಬೇಕಾದ ತ್ಯಾಗಗಳಿಗೆ ಸಮಾಜ ಅವರಿಗೆ ಪೂರ್ಣ ಪ್ರಮಾಣದಲ್ಲಿ ಗೌರವ ಸಲ್ಲಿಸಬೇಕೇ ವಿನಃ ಹೀಗಳಿಕೆ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಸಚಿವರ ವಿಶೇಷ ಅಧಿಕಾರಿ ಲೋಕೇಶ್‌, ಜ್ಯೋತಿ ನಂಜುಂಡಸ್ವಾಮಿ, ವೈ. ಮೋಹನ್‌, ವಸಂತ್‌, ಸುಜಾತಾ, ಬದರಿನಾಥ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next