Advertisement

ಆ್ಯಂಬುಲೆನ್ಸ್‌ ಮಾಲಿಕರಿಂದ ದಿಢೀರ್‌ ಪ್ರತಿಭಟನೆ

09:20 PM May 25, 2021 | Team Udayavani |

ಶಿವಮೊಗ್ಗ: ಬೇಡಿಕೆ ಈಡೇರಿಸಿಬೇಕೆಂದು ಒತ್ತಾಯಿಸಿ ಖಾಸಗಿ ಆ್ಯಂಬುಲೆನ್ಸ್‌ಗಳ ಮಾಲೀಕರು ಸೋಮವಾರ ದಿ ಢೀರ್‌ ಪ್ರತಿಭಟನೆ ನಡೆಸಿದರು. ಇದರಿಂದ ಮೆಗ್ಗಾನ್‌ ಆಸ್ಪತ್ರೆಯ ಶವಾಗಾರದಲ್ಲಿ ಇದ್ದ ಶವ ಸಾಗಿಸಲಾಗದೆ ಮೃತರ ವಾರಸುದಾರರು ಪರದಾಡಿದರು.

Advertisement

ಕಳೆದ 15 ದಿನಗಳಿಂದ ಖಾಸಗಿ ಆ್ಯಂಬುಲೆನ್ಸ್‌ ಮಾಲೀಕರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಇಲಾಖೆ ಜಿಲ್ಲಾಡಳಿತದ ಮಧ್ಯ ಪ್ರವೇಶದಿಂದಾಗಿ ಕಿ.ಮೀ.ಗೆ ಇಂತಿಷ್ಟು ಎಂದು ದರ ಕೂಡ ನಿಗದಿ ಮಾಡಲಾಗಿತ್ತು. ಅಲ್ಲದೆ ಒಂದು ಆ್ಯಂಬುಲೆನ್ಸ್‌ಗೆ 4 ಪಿಪಿಇ ಕಿಟ್‌ಗಳನ್ನು ನೀಡುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಖಾಸಗಿ ಜಿಲ್ಲಾಡಳಿತ ನಿಗದಿ ಪಡಿಸಿದ ದರ ಒಪ್ಪಿಕೊಳ್ಳದ ಆ್ಯಂಬುಲೆನ್ಸ್‌ ನವರು ದಿಢೀರ್‌ ಪ್ರತಿಭಟನೆ ಹಾದಿ ಹಿಡಿದರು.

ಕಳೆದ ಮಧ್ಯರಾತ್ರಿಯಿಂದಲೇ ಖಾಸಗಿ ಆಂಬುಲೆನ್‌ Õನವರು ಮೃತ ದೇಹಗಳನ್ನು ಸಾಗಿಸಲು ಒಪ್ಪದೆ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಜಿಲ್ಲಾಡಳಿತ ನಿಗದಿಪಡಿಸಿದ ದರವನ್ನು ಪರಿಷ್ಕರಿಸಬೇಕು. ಓಮ್ನಿ ಆಂಬುಲೆನ್‌ Õಗಳಿಗೆ ಕಿ.ಮೀ.ಗೆ 20 ರೂ. ನೀಡಬೇಕು.

ಖಾಸಗಿ ಆಂಬುಲೆನ್ಸ್‌ಗಳ ಚಾಲಕರನ್ನು ಕೊರೊನಾ ವಾರಿಯರ್ಸ್‌ಗಳೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಪ್ರಶಾಂತ್‌ ಮುನ್ನೋಳಿ, ಪಿಐ ಹರೀಶ್‌ ಪಟೇಲ್‌ ಸೇರಿದಂತೆ ಅ ಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಆ್ಯಂಬುಲೆನ್ಸ್‌ಗಳ ಚಾಲಕ ಮತ್ತು ಮಾಲೀಕರ ನಡುವೆ ಮಾತುಕತೆ ನಡೆಸಿ ಮನವೊಲಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next