Advertisement

ಶಿವಾಲಿ ಭರತನಾಟ್ಯ ರಂಗಪ್ರವೇಶ

03:08 PM Nov 04, 2017 | Team Udayavani |

ಬೆಂಗಳೂರಿನ ಕಲಾಸಾಗರಕ್ಕೆ ಹೊಸ ಹೊಸ ಕಲಾವಿದರು ತೊರೆಗಳಾಗಿ ಹರಿದುಬರುತ್ತಲೇ ಇದ್ದಾರೆ. ಈಗ ಹೊಸ ಸೇರ್ಪಡೆ ಕು. ಶಿವಾಲಿ ಬಿ.ಎಂ.! ನಾಟೇಶ್ವರ ನೃತ್ಯ ಶಾಲಾ ಏರ್ಪಡಿಸಿರುವ ಭರತನಾಟ್ಯ ರಂಗಪ್ರವೇಶದಲ್ಲಿ ಶಿವಾಲಿ, ನೃತ್ಯಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಾದಬ್ರಹ್ಮ ಡಾ. ಹಂಸಲೇಖ, ಕಲಾಭೂಷಣ ಬಿ.ಕೆ. ಅನಂತರಾಮ್‌, ವಿದುಷಿ ಲಕ್ಷ್ಮಿ ಮತ್ತಿತತರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Advertisement

ಅಂದಹಾಗೆ, ಶಿವಾಲಿ ಅವರು ಅಂಬಿಕಾ ಮತ್ತು ಮಂಜುನಾಥ್‌ ದಂಪತಿಯ ಪುತ್ರಿ. ನೃತ್ಯಗುರು ಕೆ.ಪಿ. ಸುರೇಶ್‌ ಬಾಬು ಅವರ ಮಾರ್ಗದರ್ಶನದಲ್ಲಿ ಶಿವಾಲಿ ನೃತ್ಯಾಭ್ಯಾಸ ನಡೆಸಿದ್ದರು. ಪ್ರಸ್ತುತ ಬೆಂಗಳೂರಿನ ಎಂಇಎಸ್‌ ಕಿಶೋರ್‌ ಕೇಂದ್ರ ಪಿಯು ಕಾಲೇಜಿನಲ್ಲಿ ಮೊದಲ ಪಿಯುಸಿ ಓದುತ್ತಿರುವ ಶಿವಾಲಿ, ವ್ಯಾಸಂಗದಲ್ಲೂ ಮುಂಚೂಣಿಯಲ್ಲಿರುವ ಪ್ರತಿಭೆ.

ಎಲ್ಲಿ?: ಕೃಷ್ಣದೇವರಾಯ ಕಲಾಮಂದಿರ, ಚೌಡಯ್ಯ ಮೆಮೊರಿಯಲ್‌ ಹಾಲ್‌ ಹಿಂಭಾಗ, ವಯ್ನಾಲಿಕವಾಲ್‌
ಯಾವಾಗ?: ನ.5, ಭಾನುವಾರ, ಸಂ.4

Advertisement

Udayavani is now on Telegram. Click here to join our channel and stay updated with the latest news.

Next