Advertisement

“ಪರಿಂದಾ’, “ಚಮೇಲಿ’ಚಿತ್ರಗಳಿಗೆ ಚಿತ್ರಕಥೆ ಬರೆದ ಚಿತ್ರ ಸಾಹಿತಿ ಶಿವಕುಮಾರ್‌ ನಿಧನ

12:23 AM Apr 12, 2022 | Team Udayavani |

ಮುಂಬಯಿ: ಬಾಲಿವುಡ್‌ನ‌ ಸೂಪರ್‌ಹಿಟ್‌ ಚಿತ್ರಗಳಾದ “ಪರಿಂದಾ’, “1942: ಎ ಲವ್‌ ಸ್ಟೋರಿ’, “ಚಮೇಲಿ’ ಮುಂತಾದ ಚಿತ್ರಗಳಿಗೆ ಚಿತ್ರಕಥೆ ಬರೆದ ಚಿತ್ರಸಾಹಿತಿ ಹಾಗೂ ನಟ ಶಿವಕುಮಾರ್‌ ಸುಬ್ರಹ್ಮಣ್ಯಂ, ರವಿವಾರ ಮಧ್ಯರಾತ್ರಿ ಮುಂಬಯಿಯಲ್ಲಿ ನಿಧನ ಹೊಂದಿದ್ದಾರೆ.

Advertisement

ಅವರ ಪುತ್ರ ಜಹಾನ್‌ ಎರಡು ತಿಂಗಳ ಹಿಂದೆ ವಿಧಿವಶರಾಗಿದ್ದರು. ಚಿತ್ರರಂಗದ ಎಲ್ಲರಿಂದ “ಶಿವ ದಾದಾ’ (ಶಿವ ಅಣ್ಣ) ಎಂದೇ ಕರೆಯಲ್ಪಡುತ್ತಿದ್ದ ಶಿವ ಸುಬ್ರಹ್ಮಣ್ಯಂ ಅವರು ಇತ್ತೀಚೆಗೆ ಅರ್ಜನ್‌ ಕಪೂರ್‌- ಆಲಿಯಾ ಭಟ್‌ ಅಭಿನಯದ ಇತ್ತೀಚಿನ ಚಿತ್ರ “ಟು ಸ್ಟೇಟ್ಸ್‌’ ನಲ್ಲಿ ಕಾಣಿಸಿಕೊಂಡಿದ್ದರು. ಶಿವ ಅವರ ನಿಧನಕ್ಕೆ ಬಾಲಿವುಡ್‌ ಹಿರಿಯ ನಟ ನಾನಾ ಪಾಟೇಕರ್‌, ನಿರ್ದೇಶಕ ಅನುರಾಗ್‌ ಕಶ್ಯಪ್‌, ಅನಿಲ್‌ ಕಪೂರ್‌ ಮೊದಲಾದ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಉಡುಪಿಯಲ್ಲಿ ಡಿಜಿಟಲ್‌ ಗ್ರಂಥಾಲಯ ಉದ್ಘಾಟಿಸಿದ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next