Advertisement

ಶಿವಸೇನೆ ಸಂಸದ ಗಾಯಕ್ವಾಡ್‌ ವಿಮಾನಯಾನ ನಿಷೇಧ ತೆರವು 

03:50 PM Apr 07, 2017 | |

ನವದೆಹಲಿ: ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯೇಟು ನೀಡಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ಗೆ ಹಾರಾಟ  ನಿಷೇಧ ಹೇರಿದ್ದನ್ನು ಶುಕ್ರವಾರ ವಿಮಾನಯಾನ ಸಂಸ್ಥೆಗಳು ತೆರವುಗೊಳಿಸಿವೆ. 

Advertisement

ಘಟನೆಗೆ ವಿಷಾದ ವ್ಯಕ್ತ ಪಡಿಸಿ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ನೀಡಿದ ಬಳಿಕ ವಿಮಾನಯಾನ ಸಂಸ್ಥೆಗಳು ನಿಷೇಧ ತೆರವುಗೊಳಿಸಿವೆ ಎಂದು ಏರ್‌ ಇಂಡಿಯಾ ಹೇಳಿದೆ. 

ಸುಮಾರು 2 ವಾರಗಳ ಕಾಲ ನಿಷೇಧಹೇರಿದ ಕಾರಣ ಗಾಯಕ್ವಾಡ್‌ಗೆ ವಿಮಾನ ಪ್ರಯಾಣ ಸಾಧ್ಯವಾಗಿರಲಿಲ್ಲ. ಅವರು ರೈಲಿನಲ್ಲೇ ದೆಹಲಿಗೆ ಪ್ರಯಾಣಸಿದ್ದರು. 

ಈ ವಿಚಾರ ಗುರುವಾರ ಸಂಸತ್‌ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತಲ್ಲದೆ ಕೇಂದ್ರದ ಇಬ್ಬರು ಸಚಿವರ ನಡುವೆಯೇ ಮಾತಿನ ಚಕಮಕಿಗೆ ಕಾರಣವಾಗಿ, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿ, ಕೊನೆಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ರ ಮಧ್ಯಪ್ರವೇಶದಿಂದಾಗಿ ತಿಳಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next