Advertisement

NDA ಮೈತ್ರಿಕೂಟಕ್ಕೆ ಗುಡ್ ಬೈ ಹೇಳಿದ ಶಿವಸೇನಾ: ಏಕಾಂಗಿ ಸ್ಪರ್ಧೆ

01:13 PM Jan 23, 2018 | Sharanya Alva |

ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ಶಿವಸೇನಾ ಎನ್ ಡಿಎ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆ. ಮುಂದಿನ ಲೋಕಸಭಾ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಅಖಾಡಕ್ಕಿಳಿಯಲು ನಿರ್ಧರಿಸಿದೆ ಎಂದು ಶಿವಸೇನಾ ತಿಳಿಸಿದೆ.

Advertisement

ಶಿವಸೇನಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯಲ್ಲಿ ಈ ಪ್ರಸ್ತಾಪ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ. ಎನ್ ಡಿಎ ಜತೆಗಿನ ಬಹುಕಾಲದ ಮೈತ್ರಿಯಿಂದ ಹೊರಬರಲು ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದು ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕಟು ಲೇಖನಗಳು, ಸಂಪಾದಕೀಯ ಬರೆಯುವ ಮೂಲಕ ಟೀಕಿಸುತ್ತಿದ್ದು, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡಾ ಮೈತ್ರಕೂಟದಿಂದ ಹೊರಬರುವ ಎಚ್ಚರಿಕೆ ನೀಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next