Advertisement
ಹೊರಗುತ್ತಿಗೆ ನಿರ್ವಹಣೆಇಲ್ಲಿನ ಶೌಚಾಲಯವನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ಹೊರಗುತ್ತಿಗೆ ನೀಡಲಾಗಿತ್ತು. ಅವರು ಸಾರ್ವಜನಿಕರಿಂದ ಶುಲ್ಕ ಪಡೆದು ನಿರ್ವಹಣೆ ನಡೆಸುತ್ತಿದ್ದರು. ಶೌಚಾಲ ಯಕ್ಕೆ ಬಂದವರಿಂದ ವಸೂಲು ಮಾಡುವ ಶುಲ್ಕದಲ್ಲಿ ಜೀವನ ಸಾಗಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಶೌಚಾಲಯದ ನಿರ್ವಹಣೆ ನಡೆಸುತ್ತಿದ್ದ ವ್ಯಕ್ತಿ ಪಂಚಾಯತ್ಗೆ ತಿಳಿಸದೆ ಶೌಚಾಲ ಯಕ್ಕೆ ಬೀಗ ಜಡಿದು ಹೋಗಿದ್ದಾನೆ ಎನ್ನಲಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.ಆಗ ಪಂಚಾಯತ್ ಆಡಳಿತ ಶುಚಿ ಇಂಟರ್ನ್ಯಾಶನಲ್ ಅವರೊಂದಿಗೆ ಮಾಡಿ ಕೊಂಡಿರುವ ಒಪ್ಪಂದದ ಪ್ರಕಾರ ಶೌಚಾಲಯ ನಿರ್ವಹಣೆಗೆ ಬದಲಿ ಜನರ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಉಂಟಾದ ತಾತ್ಕಾಲಿಕ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿತ್ತು. ಇದೀಗ ಬದಲಿಗಾಗಿ ಬಂದ ವ್ಯಕ್ತಿ ಕೂಡ ಪಂಚಾಯತ್ಗೆ ತಿಳಿಸದೆ ಬೀಗ ಜಡಿದು ಹೋಗಿದ್ದು ಸಮಸ್ಯೆ ಪುನರಾವರ್ತನೆಯಾಗಿದೆ. ಈಗಾಗಲೇ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಗಿದ್ದು ಸ್ಥಳಿಯಾಡಳಿತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷé ವಹಿಸುತ್ತಿದೆ ಎಂದು ಮಾಜಿ ಗ್ರಾ.ಪಂ. ಸದಸ್ಯ ರಮೇಶ್ ಬಂಗೇರ ಆರೋಪಿಸಿದ್ದಾರೆ.
Related Articles
Advertisement
ಸಾರ್ವಜನಿಕರಿಗೆ ಉಂಟಾದ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಿರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ತಿಳಿಸಿದ್ದಾರೆ.