Advertisement

Shirva; ನಿವೃತ್ತ ಎಲ್ ಐಸಿ ಅಭಿವೃದ್ಧಿ ಅಧಿಕಾರಿ ಪಿಲಾರು ಪರಾರಿ ರವೀಂದ್ರ ಶೆಟ್ಟಿ ನಿಧನ

11:53 AM Jan 11, 2024 | Team Udayavani |

ಶಿರ್ವ: ನಿವೃತ್ತ ಎಲ್ ಐಸಿ ಅಭಿವೃದ್ಧಿ ಅಧಿಕಾರಿ, ಅಡ್ವೆ ಪಟೇಲರಾಗಿದ್ದ ದಿ| ದೊಡ್ಡಣ್ಣ ಶೆಟ್ಟಿಯವರ ಪುತ್ರ ಪಿಲಾರು ಪರಾರಿ ರವೀಂದ್ರ ಶೆಟ್ಟಿ (86) ಅವರು ಜ.9 ರಂದು ಮೈಸೂರಿನ ವಿಜಯನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

Advertisement

ಅವರು ಸುಮಾರು 42 ವರ್ಷಗಳ ಕಾಲ ಮುಂಬಯಿ ಘಾಟ್‌ಕೋಪರ್‌ ನ ಜೀವವಿಮಾ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಪಿಲಾರು ತ‌ಂಬಿದಬೆಟ್ಟು ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಪಿಲಾರು ಪರಾರಿ ಕೊಡಮಣಿತ್ತಾಯ ದೈವಸ್ಥಾನ, ಪಿಲಾರು ಪರಾರಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರಮಿಸಿದ್ದರು.

ಊರಿನ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next