Advertisement

ಶಿರ್ವ: ಜಾಗದ ತಕರಾರು; ಮಾರಕಾಸ್ತ್ರದಿಂದ ಹಲ್ಲೆ

08:33 PM Oct 07, 2021 | Team Udayavani |

ಶಿರ್ವ: ಜಾಗದ ವಿಷಯದಲ್ಲಿ ಅಣ್ಣ ತಮ್ಮಂದಿರೊಳಗೆ ಜಗಳ ನಡೆದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಆರೋಪಿ ಪರಾರಿಯಾದ ಘಟನೆ ಶಿರ್ವ ಬಸ್ಸು ತಂಗುದಾಣದ ಬಳಿಯ ವಾಣಿಜ್ಯ ಸಂಕೀರ್ಣದ ಬಳಿ ಅ. 7 ರಂದು ಮಧ್ಯಾಹ್ನ ನಡೆದಿದೆ. ದಿನೇಶ್‌ ಸುವರ್ಣ(60) ಪ್ರಕರಣದ ಆರೋಪಿ.

Advertisement

ಘಟನೆಯ ವಿವರ

ಶಿರ್ವ ಬಸ್ಸು ತಂಗುದಾಣದ ಬಳಿಯ ವಿಮಲ್‌ ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿರುವ ಪ್ರತೀಶ್‌ ಸುವರ್ಣ ಮತ್ತು ಜ್ಯೋತಿಲತಾ ಅವರಿಗೆ ಸೇರಿದ ಜಾಗ ಮತ್ತು ಶೆಡ್‌ನ್ನು ನೋಡಿಕೊಳ್ಳಲು ಸುರೇಶ್‌ ಸುವರ್ಣರಿಗೆ ಜಿಪಿಎ ನೀಡಿದ್ದರು. ಸುರೇಶ್‌ ಸುವರ್ಣ(67) ತನ್ನ ತಮ್ಮ ಜಯಪ್ರಕಾಶ್‌ ಅವರೊಂದಿಗೆ ಜಾಗದ ಬಳಿ ನೋಡಲು ಬಂದಾಗ ಆರೋಪಿ ದಿನೇಶ್‌ ಸುವರ್ಣ ಸದ್ರಿ ಶೆಡ್‌ನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದು, ಶೆಡ್‌ನ್ನು ನೆಲಸಮ ಮಾಡಲು ವಾರದೊಳಗೆ ಖಾಲಿ ಮಾಡಬೇಕೆಂದು ಬಾಡಿಗೆದಾರರಿಗೆ ತಿಳಿಸಿದ್ದರು.

ಆಗ ಅಲ್ಲಿಗೆ ಬಂದ ಆರೋಪಿ ಸದ್ರಿ ಜಾಗವು ನನ್ನ ಸ್ವಾಧೀನದಲ್ಲಿದೆ ಎಂದು ತಿಳಿಸಿ ಸುರೇಶ್‌ ಸುವರ್ಣ ಮತ್ತು ಜಯಪ್ರಕಾಶ್‌ ಸುವರ್ಣಅವರಿಗೆ ಅವಾಚ್ಯವಾಗಿ ಬೈದು ಅಲ್ಲಿದ್ದ ಮರದ ಸೋಂಟೆಯಿಂದ ಜಯಪ್ರಕಾಶ್‌ಗೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ:ರಾಜ್ಯದ ಇನ್ನೂ 8 ಜಿಲ್ಲೆಗಳಲ್ಲಿ  ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕಿದೆ: ಸಿಎಂ ಬೊಮ್ಮಾಯಿ

Advertisement

ಆ ಸಮಯ ಅಲ್ಲಿಗೆ ಬಂದ ಕುಬೇರಾ ಎಂಟರ್‌ಪ್ರೈಸಸ್‌ನ ಮಾಲಕ ಹರಿಪ್ರಸಾದ್‌ಅವರಿಗೂ ಅವಾಚ್ಯವಾಗಿ ನಿಂದಿಸಿ, ತನ್ನ ಕಚೇರಿಯಿಂದ ಮಾರಕಾಸ್ತ್ರವನ್ನು ತಂದು ಮೂವರನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರ ಬೀಸಿದ್ದು ಹರಿಪ್ರಸಾದ್‌ ಅವರ ಎಡಗೈಯ ಕಿರು ಬೆರಳಿಗೆ ತಾಗಿ ರಕ್ತ ಗಾಯವಾಗಿದೆ. ನಿಮ್ಮನ್ನೆಲ್ಲಾ ಕೊಂದು ಹಾಕುತ್ತೇನೆ ಎಂದು ಜೀವಬೆದರಿಕೆ ಹಾಕಿ ಮಾರಕಾಸ್ತ್ರವನ್ನು ಅಲ್ಲಿಯೇ ಬಿಸಾಡಿ ಪರಾರಿಯಾಗಿದ್ದಾನೆ ಎಂದು ಸುರೇಶ್‌ ಸುವರ್ಣ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next