Advertisement

Shiruru hill collapse ಪರಿಣಾಮ: ಲಾರಿ ಚಾಲಕರಿಗೆ ನೆರವಾದ ಟ್ಯಾಕ್ಸಿ ಚಾಲಕರ ತಂಡ

10:27 PM Jul 21, 2024 | Team Udayavani |

ಕುಮಟಾ: ಶಿರೂರು ಬಳಿ ಗುಡ್ಡ ಕುಸಿತದ ಕಾರಣ ರಸ್ತೆ ಸಂಪರ್ಕ ಸ್ಥಗಿತಗೊಂಡಿರುವುದರಿಂದ ಕಳೆದ ಮೂರ್ನಾಲ್ಕು ದಿನಗಳ ಕಾಲ ರಸ್ತೆಯಲ್ಲಿಯೇ ನಿಂತಿರುವ ಲಾರಿಗಳ ಚಾಲಕರಿಗೆ ಪಟ್ಟಣದ ಮಹಾಸತಿ ಟ್ಯಾಕ್ಸಿ ಚಾಲಕರ ತಂಡವು ಊಟವನ್ನು ನೀಡುವ ಮೂಲಕ ಮಾನವೀಯತೆ ಮೆರೆದರು.

Advertisement

ತಾಲೂಕಿನ ಹೊಳೆಗದ್ದೆ ಟೋಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ನಿಂತಿರುವ ಬೇರೆ ರಾಜ್ಯ ಹಾಗೂ ಜಿಲ್ಲೆಗಳ ಲಾರಿ ಚಾಲಕರು ಗುಡ್ಡ ಕುಸಿತದಿಂದಾಗಿ ಮುಂದೆ ಸಂಚರಿಸಲಾಗದೇ ನಿಂತಿದ್ದಾರೆ.ಕೆಲವರಿಗೆ ಊಟ ಮಾಡಿಕೊಳ್ಳುವ ವ್ಯವಸ್ಥೆ ಇದೆ.ಇನ್ನೂ ಕೆಲವರಿಗೆ ಇಲ್ಲ.ಜೊತೆಗೆ ಹಲವೆಡೆಗಳಲ್ಲಿ ಹೊಟೆಲ್ ಕೂಡ ಇಲ್ಲದೆ ಚಾಲಕರು ಪರದಾಡುತ್ತಿದ್ದಾರೆ.ಇದನ್ನ ಮನಗಂಡು ಒಂದು ದಿನದ ಮಟ್ಟಿಗಾದರೂ ನೆರವಾಗಬೇಕೆಂಬ ಉದ್ದೇಶದಿಂದ ಹೊಳೆಗದ್ದೆ ಟೋಲ್ ನಿಂದ ಹಿರೇಗುತ್ತಿಯ ವರೆಗೆ ಸಾಗಿದ ಟ್ಯಾಕ್ಸಿ ಚಾಲಕರ ತಂಡ ಲಾರಿ ಚಾಲಕರಿಗೆ ಊಟವನ್ನು ನೀಡಿದೆ.

ಇವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next