Advertisement

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

06:50 PM Jul 26, 2024 | Team Udayavani |

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ಶಿರೂರು ಬಳಿ ನಡೆದ ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆಗೆ ಶುಕ್ರವಾರ ಕೂಡಾ ಆಗಾಗ ಬಿದ್ದ ರಭಸದ ಮಳೆ ಹಾಗೂ ನದಿಯ ನೀರಿನ ವೇಗ ಅಡ್ಡಿಯಾಯಿತು.

Advertisement

ನದಿಯಾಳದಲ್ಲಿ ಸಿಲುಕಿರುವ ಭಾರತ್ ಬೆಂಜ್ ಟ್ರಕ್, ಗ್ಯಾಸ್ ಟ್ಯಾಂಕರ್ ಚೆಸ್ಸಿ ಇರುವ ಜಾಗವನ್ನು ಹುಡುಕಲು ಡ್ರೋನ್ ಯಶಸ್ವಿಯಾದರೂ ಟ್ರಕ್ ಇರುವ ಸ್ಥಳ ತಲುಪಲು ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ ನೀರಿನ ಅಂಡರ್ ಕರೆಂಟ್ 6.6 ನಾಟ್ಸ್ (nots) ವೇಗದ ಕಾರಣ ನದಿ ನೀರಿಗೆ ಧುಮುಕಿ ಟ್ರಕ್ ಇರುವ ಸ್ಥಳ ತಲುಪಲು ನೇವಿ ಮುಳುಗು ತಜ್ಞರಿಗೆ ಸಾಧ್ಯವಾಗಲಿಲ್ಲ. ನದಿ, ಸಮುದ್ರದಲ್ಲಿ ಈಜುವ ನೇವಿ ಪರಿಣಿತರು ಎರಡು ಸಲ ಗಂಗಾವಳಿ ನದಿಯ ಬಳಿಗೆ ಆಗಮಿಸಿ, ನದಿಗೆ ಇಳಿಯಲು ವಿಫಲ ಪ್ರಯತ್ನ ನಡೆಸಿದರು.

ಕಾರವಾರ ಶಾಸಕ ಸೈಲ್, ಕೇರಳದ ಲೋಕಪಯೋಗಿ ಸಚಿವರು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶಿರೂರು ಸ್ಥಳದಲ್ಲಿದ್ದು ಶುಕ್ರವಾರ ಡ್ರೋನ್ ಬಳಸಿ ನಡೆಸಿದ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಿದರು.

ನಾಳೆ ನದಿಯಲ್ಲಿ ಕಾರ್ಯಾಚರಣೆ ಮಾಡಲು ಶಾಸಕರು ಗೋವಾದಿಂದ ಬಾರ್ಜ ಹಾಗೂ ಪ್ಲಾಟ್ ಫಾರಂ ತರಿಸುತ್ತಿದ್ದು, ಶಿರೂರು ಗಂಗಾವಳಿ ನದಿಯ ಬಳಿ ಟ್ರಕ್ ಮೇಲೆ ತರಲು ಮತ್ತೊಂದು ‌ಪ್ರಯತ್ನ ನಡೆಯಲಿದೆ.

Advertisement

ಶಿರೂರು ಹೆದ್ದಾರಿ ಪಕ್ಕದ ಗುಡ್ಡ ಭೂಕುಸಿತದಲ್ಲಿ ಇನ್ನೂ ಮೂವರ ಶವ ದೊರೆಯಬೇಕಿದೆ. ಈಗಾಗಲೇ ದೊರೆತ ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರು ಹಾಗೂ ತಮಿಳು ನಾಡಿನ ಮೂವರು ಲಾರಿ ಚಾಲಕರು ಹಾಗೂ ಸಣ್ಣಿ ಹನುಮಂತ ಗೌಡ ಕುಟುಂಬದ ಸದಸ್ಯರಿಗೆ ತಲಾ‌ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಗುರುವಾರ ಗುರುತು ಪತ್ತೆಯಾದ ಶರವಣನ್ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂ. ನೀಡಲಾಗಿದೆ.

ಶಿರೂರು ಹೆದ್ದಾರಿಯ ಎರಡು ಬದಿಗೆ ಬಿದ್ದ ಮಣ್ಣು ತೆರವಿನ ಕಾರ್ಯ ಮುಂದುವರಿದಿದೆ. ಎನ್ಎಚ್ಎಐ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್ ವಿಭಾಗ ಶಿರೂರು ಬಳಿ ಹಲವು ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next