Advertisement

ಶಿರ್ಲಾಲು: ಅಪಾಯಕಾರಿ ವಿದ್ಯುತ್‌ ಕಂಬಗಳ ತೆರವು

09:56 PM Jun 28, 2019 | Team Udayavani |

ಅಜೆಕಾರು: ಶಿರ್ಲಾಲು ಗ್ರಾಮದ ಹೆಗ್ಡೆಬೆಟ್ಟು ಪೈತಾಳ ಸಂಪರ್ಕ ರಸ್ತೆಯಲ್ಲಿದ್ದ ಅಪಾಯಕಾರಿ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಎತ್ತರದ ಪ್ರದೇಶಗಳಲ್ಲಿ ಹೊಸದಾಗಿ ಅಳವಡಿಸಲಾಗಿದೆ. ಇದರಿಂದಾಗಿ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.

Advertisement

ವರದಿ ಫ‌ಲಶ್ರುತಿ
ಹೆಗ್ಡೆಬೆಟ್ಟು ಪೈತಾಳ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣ ಸಂದರ್ಭ ತಗ್ಗು ಪ್ರದೇಶಗಳಲ್ಲಿದ್ದ ವಿದ್ಯುತ್‌ ಕಂಬ ತೆರವುಗೊಳಿಸದೆ ವಿದ್ಯುತ್‌ ತಂತಿಗಳು ಕೈಗೆಟಕುವಂತಿದ್ದು ಅಪಾಯಕಾರಿಯಾಗಿ ರುವ ಬಗ್ಗೆ ಉದಯವಾಣಿ ಪತ್ರಿಕೆ ಜೂ. 23ರಂದು ವರದಿ ಪ್ರಕಟಿಸಿತ್ತು.

ರಸ್ತೆಯಲ್ಲಿ ಘನವಾಹನಗಳು ಸಂಚರಿಸದಂತೆ ಇದ್ದ ವಿದ್ಯುತ್‌ ತಂತಿ ಹಾಗೂ ಸೇತುವೆ ಪಕ್ಕ ಕೈಗೆಟಕುವಂತಿದ್ದ ತಂತಿಗಳಿಂದ ತೀವ್ರ ಅಪಾಯ ಇರುವ ಬಗ್ಗೆ ಪತ್ರಿಕೆ ಎಚ್ಚರಿಸಿ ತಗ್ಗ ಪ್ರದೇಶದಲ್ಲಿರುವ ವಿದ್ಯುತ್‌ ಕಂಬ ತೆರವುಗೊಳಿಸಿ ಎತ್ತರದ ಭಾಗದಲ್ಲಿ ಅಳವಡಿಸಿ ಅಪಾಯ ತಪ್ಪಿಸುವಂತೆ ಆಗ್ರಹಿಸಿತ್ತು. ವರದಿಯಿಂದ ಎಚ್ಚೆತ್ತು ಕೊಂಡ ಗುತ್ತಿಗೆದಾರರು ವಿದ್ಯುತ್‌ ಕಂಬ ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಿ ಹೊಸದಾಗಿ ವಿದ್ಯುತ್‌ ತಂತಿ ಅಳವಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next