Advertisement

ಶಿರಸಿಯಲ್ಲಿ ವಿಶಿಷ್ಟ ನಾಗರ ಪಂಚಮಿ‌ |ಕಾಡಿನ ನಿಜ ನಾಗರ ಹಾವಿಗೆ ಹಾಲೆರದು‌ ಪೂಜೆ…!

04:15 PM Aug 13, 2021 | Team Udayavani |

ಶಿರಸಿ : ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ – ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ “ನಾಗ” ಅಥವಾ “ಸರ್ಪ”. ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾಗಿದೆ.

Advertisement

ಹೌದು, ನಾಗರ ಪಂಚಮಿಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆ ಇದೆ.  ನಾಗರ ಬನದಲ್ಲಿ ಪೂಜೆ ಮಾಡಿ ಭಕ್ತಿ ಶ್ರದ್ಧೆ ಅರ್ಪಿಸುವುದು ನಾಗರ ಪಂಚಮಿಯ ದಿನ ಸರ್ವೇ ಸಾಮಾನ್ಯ. ಆದರೇ, ಇಲ್ಲೊಬ್ಬರು ನಿಜ ನಾಗರ ಹಾವಿಗೆ ಪೂಜೆ ಮಾಡಿ ಹಣ್ಣು ಕಾಯಿ ನೈವೇದ್ಯ ಮಾಡಿ ಭಕಿ ಸಮರ್ಪಿಸಿದ್ದಾರೆ.

 ಇದನ್ನೂ ಓದಿ : ದಾಳಿ ಯತ್ನ ವಿಫಲ: ಕುಲ್ಗಾಮ್ ನಲ್ಲಿ ಭದ್ರತಾ ಪಡೆ ಎನ್ ಕೌಂಟರ್ ಗೆ ಪಾಕ್ ಉಗ್ರ ಬಲಿ

 ಉರಗ ತಜ್ಞ ಪ್ರಶಾಂತ ‌ಹುಲೆಕಲ್ ಹಾಗೂ ಅವರ ಕುಟುಂಬದಿಂದ‌‌ ನಾಗರ ಹಾವಿಗೇ ಪೂಜೆ‌ ಮಾಡಿ ಭಕ್ತಿ ಭಾವ ಸಮರ್ಪಿಸಿರುವುದು ವಿಶೇಷ.

Advertisement

ಕಳೆದ‌ ಮೂರು ದಶಕಗಳಿಂದ‌‌ ನಾಡಿಗೆ ಬಂದ ವಿಷಕಾರಿ‌ ಹಾವನ್ನೂ‌ ಹಿಡಿದು‌ ಕಾಡಿಗೆ  ಬಿಟ್ಟ ತಜ್ಞ ತಂದೆ‌ ಸುರೇಶ ಹುಲೇಕಲ್ ಅಗಲಿಕೆಯ ಬಳಿಕವೂ ಕಳೆದ ನಾಲ್ಕು ವರ್ಷದಿಂದ ನಾಗರ ಪಂಚಮಿ‌ ದಿನದಂದು ಕಾಡಿನಲ್ಲಿ‌‌ ಹಾವು ಹುಡುಕಿ ಅದಕ್ಕೆ ಪೂಜಿಸುವ ಮೂಲಕ‌ ಜನ ಜಾಗೃತಿ‌ ಮಾಡುತ್ತಿರುವ ಉರಗ‌ ಪ್ರೇಮಿ ಪ್ರಶಾಂತ ‌ಹುಲೆಕಲ್ ಹಾಗೂ ಕುಟುಂಬ ಈ ವರ್ಷದ ನಾಗರ ಪಂಚಮಿಗೂ ಅದೇ ಪದ್ಧತಿಯನ್ನು ಮುಂದು ವರಿಸಿದ್ದಾರೆ.

ಹೆಡೆ ಎತ್ತಿ ತಲೆದೂಗಿಸುತ್ತಾ ಆಶೀರ್ವದಿಸುತ್ತಿರುವಂತೆ ನಾಗರ ಹಾವು ಭಕ್ತಿಯನ್ನು ಸ್ವೀಕಾರ ಮಾಡಿಕೊಂಡಿದೆ.

ಇದನ್ನೂ ಓದಿ : ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಿ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next