Advertisement

ಶಿರಸಿ: ಕೆಡಿಸಿಸಿ ಬ್ಯಾಂಕ್ ನಿಂದ ದಿ. ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿ ಪ್ರದಾನ

05:21 PM Dec 18, 2021 | Team Udayavani |

ಶಿರಸಿ: ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೊ ಆಪರೇಟಿವ್ ( ಕೆಡಿಸಿಸಿ) ಬ್ಯಾಂಕ್ ಜಿಲ್ಲೆಯ ಉತ್ತಮ ಸಹಕಾರಿಗೆ ನೀಡುವ ದಿ. ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿಯನ್ನು ಅಂಕೋಲಾದ ಸಹಕಾರಿ  ರಮಾನಂದ ನಾಯಕ ಹಾಗೂ ಸಹಕಾರಿ ನೌಕರ ಸುಬ್ರಾಯ ರೇವಣಕರ  ಅವರಿಗೆ ಪ್ರದಾನ ಮಾಡಲಾಯಿತು.

Advertisement

ನಗರದ ಕೆಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ ನಾಯಕ ಇತರರು ಪ್ರಶಸ್ತಿ‌ ಪ್ರದಾನ ಮಾಡಿದರು.

ಸುಂದರ ರಾವ್ ಪಂಡಿತ ಪ್ರಶಸ್ತಿಗೆ ತ್ಯಾಗಲಿ ಸೇವಾ ಸಹಕಾರಿ ಸಂಘ ನಾಣಿಕಟ್ಟಾದ ಅಧ್ಯಕ್ಷ ಎನ್.ಬಿ.ಹೆಗಡೆ‌ ಮತ್ತೀಹಳ್ಳಿ ಹಾಗೂ ಕಾರ್ಯದರ್ಶಿ ಸುಧಾಕರ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.

ಜಿಲ್ಲೆಯ 11 ಸಂಘಗಳಿಗೆ ತಾಲೂಕಾ ಮಟ್ಟದ ಉತ್ತಮ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಹಾಗೂ  ನೂರರ ಸಾಲ ವಸೂಲಿ ಮಾಡಿದ ೫  ಸಂಘಗಳು, 7 ಕೃಷಿಯೇತರ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next