Advertisement

ಶಿರಾಲಿ ಶ್ರೀ ಚಿತ್ರಾಪುರ ಮಠಾಧೀಶರ ಚಾತುರ್ಮಾಸ್ಯ ವ್ರತಾಚರಣೆ

12:33 PM Jul 12, 2022 | Team Udayavani |

ಶೀರಾಲಿ (ಉ.ಕ): ಶಿರಾಲಿಯ ಚಿತ್ರಾಪುರ ಮಠಾಧೀಶರಾದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಚಾತುರ್ಮಾಸ್ಯ ವೃತಾಚರಣೆಯನ್ನು ಶುಭಕೃತ್‌ ಸಂವತ್ಸರದ ಆಷಾಢ ಮಾಸದ ಗುರುಪೂರ್ಣಿಮೆ ಜು. 13 ರಂದು ಮಹಾರಾಷ್ಟ್ರದ ಪುಣೆ/ ಲೋನಾವಾಳದ ಸಮೀಪವಿರುವ ಸ್ವಮಠ ಕಾರ್ಲಾದಲ್ಲಿ ಕೈಗೊಳ್ಳಲಿದ್ದಾರೆ.

Advertisement

ಎರಡು ತಿಂಗಳ ಕಾಲ ನಡೆಯಲಿರುವ ಈ ಚಾತುರ್ಮಾಸ್ಯ  ವೃತವು ನಿತ್ಯ ಧಾರ್ಮಿಕ ಪ್ರವಚನ, ಭಜನೆ, ಸಂಗೀತ, ವಿಶೇಷ ಪೂಜೆ ಹಾಗೂ ಇತರ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಚಾತುರ್ಮಾಸ್ಯ ವೃತ ಸೆಪ್ಟೆಂಬರ್‌ 10 ರಂದು ಸೀಮೊಲ್ಲಂಘನೆ ಕಾರ್ಯಕ್ರದೊಂದಿಗೆ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next