Advertisement

ಶಿರಾಡಿ: ಮಣ್ಣು ತೆರವು ಸ್ಥಗಿತ; ಆ. 23ರ ವರೆಗೆ ರೈಲು ರದ್ದು

12:53 AM Aug 11, 2019 | Team Udayavani |

ಮಂಗಳೂರು: ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಭೂಕುಸಿತ ಮುಂದುವರಿದಿದ್ದು, ಪ್ರತಿಕೂಲ ಹವಾಮಾನದಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು – ಕಲ್ಲುಗಳ ತೆರವು ಸ್ಥಗಿತಗೊಳಿಸಲಾಗಿದೆ.

Advertisement

ಸ್ಥಳದಿಂದ ಎಲ್ಲ ರೈಲ್ವೇ ಸಿಬಂದಿ ಮತ್ತು ಕಾರ್ಮಿಕರನ್ನು ತೆರವುಗೊಳಿಸಲಾಗಿದ್ದು ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಎಲ್ಲ ರೈಲುಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ.

ಹವಾಮಾನ ಇಲಾಖೆಯಿಂದ ಮುಂದಿನ ಸೂಚನೆ ಬಂದ ಬಳಿಕ ಕಾರ್ಯಾಚರಣೆ ಮರಳಿ ಪ್ರಾರಂಭಿಸಲಾಗುವುದು ಎಂದು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಪ್ರಕಟನೆ ತಿಳಿಸಿದೆ.

ರೈಲು ಸಂಚಾರ ರದ್ದು ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರಾತ್ರಿ ರೈಲುಗಳ ಸಂಚಾರವನ್ನು ಆ. 22ರ ವರೆಗೆ ಮತ್ತು ಹಗಲು ರೈಲು ಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ.

ಮಂಗಳೂರು- ಚೆನ್ನೈ
ಮಂಗಳೂರು- ಚೆನ್ನೈ ಮತ್ತು ತಿರುವನಂತ ಪುರ-ಮಂಗಳೂರು ನಡುವೆ ಕೆಲವು ರೈಲು ಸಂಚಾರವನ್ನು ಆ. 10ರಂದು ರದ್ದುಗೊಳಿಸಲಾ ಗಿತ್ತು ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

Advertisement

ಕೊಂಕಣ ರೈಲು ಮಾರ್ಗ
ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಆ. 12ರ ರೈಲು ನಂ.22660 ಡೆಹ್ರಾಡೂನ್‌- ಕೊಚ್ಚುವೇಲಿ ಎಕ್ಸ್‌ಪ್ರೆಸ್‌, ಆ. 13 ಮತ್ತು ಆ. 16ರ ರೈಲು ನಂ. 22149 ಪುಣೆ-ಎರ್ನಾಕುಳಂ ಪೂರ್ಣ ಎಕ್ಸ್‌ಪ್ರೆಸ್‌, ಆ.14ರ ರೈಲು ನಂ. 22150 ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್‌, ಆ.14ರ ರೈಲು ನಂ. 12218 ಚಂಡೀಗಢ-ಕೊಚ್ಚುವೇಲಿ ರೈಲು, ಆ. 12ರ ಕುರ್ಲಾ-ತಿರುವನಂತಪುರ ನಂ. 16345 ನೇತ್ರಾವತಿ ಎಕ್ಸ್‌ಪ್ರೆಸ್‌, ಆ. 12ರ ರೈಲು ನಂ. 12618 ನಿಜಾಮುದ್ದೀನ್‌- ಎರ್ನಾಕುಳಂ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

ವಿಮಾನ ಸಂಚಾರ ವಿಳಂಬ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳು ವಿಳಂಬ ವಾಗಿ ಸಂಚರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next