Advertisement

ಶಿರಾಡಿ: ಒಂಟಿ ಸಲಗ ದಾಳಿ

09:12 AM Apr 11, 2018 | Team Udayavani |

ಉಪ್ಪಿನಂಗಡಿ: ಶಿರಾಡಿ ಗ್ರಾಮದ ದಾನಾಜೆಯ ಅರಣ್ಯದ ಅಂಚಿನಲ್ಲಿ ಕಳೆದ 10 ದಿನಗಳಿಂದ ಕಾಡಾನೆಯೊಂದು ಬೀಡು ಬಿಟ್ಟಿದ್ದು, ರಾತ್ರಿ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಿರಾಡಿ ಗ್ರಾಮದ ದಾನಾಜೆ ನಿವಾಸಿ ಎನ್‌.ಪಿ. ಥಾಮಸ್‌ ಅವರ ತೋಟಕ್ಕೆ ಕಳೆದ ಆರೆಂಟು ದಿನಗಳಿಂದ ರಾತ್ರಿ ವೇಳೆ ನುಗ್ಗಿ ದಾಂಧಲೆ ನಡೆಸಿದೆ. 6 ತೆಂಗು,  ನೂರಾರು ಬಾಳೆ ಗಿಡಗಳನ್ನು ನಾಶಪಡಿಸಿದೆ. ಇದೇ ಪರಿಸರದ ಎನ್‌.ವಿ. ಥಾಮಸ್‌ ಅವರ ತೋಟದ 6 ತೆಂಗು, ಅಡಿಕೆ ಮರ, ಬಾಳೆ ಗಿಡಗಳನ್ನು ಕೆಡವಿದೆ.

Advertisement

ಅರಣ್ಯ ಇಲಾಖೆ ಸಿಬಂದಿಗೆ ದೂರು ನೀಡಿದ್ದೇವೆ, ಒಮ್ಮೆ ಬಂದು ನೋಡಿ ಹೋಗಿದ್ದಾರೆ. ಆದರೆ ಅದನ್ನು ಕಾಡಿಗೆ ಅಟ್ಟುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಆನೆ ಮನೆಯಂಗಳ ತನಕ ಬರಲಾರಂಭಿಸಿದ್ದು, ಮಲಗುವುದಕ್ಕೂ ಹೆದರಿಕೆ ಆಗುತ್ತಿದೆ ಎಂದು ಥಾಮಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next