Advertisement

ವೇ ಬ್ರಿಜ್‌ ಮೂಲಕವೇ ಮರಳು: ಬಡವರ ಪಾಲಿಗೆ ಬಿಸಿತುಪ್ಪವಾಗುವ ಭೀತಿ

02:02 AM Dec 05, 2019 | mahesh |

ಕುಂದಾಪುರ: ಮರಳು ತುಂಬಿದ ಲಾರಿಗಳನ್ನು “ವೇ ಬ್ರಿಜ್‌’ ಮೂಲಕ ತೂಕ ಮಾಡಿಯೇ ಗ್ರಾಹಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಗಣಿ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮರಳು ವಿತರಣೆ ಸ್ಥಗಿತವಾಗಿದೆ. ಮರಳು ತುಂಬಿದ ನೂರಾರು ಲಾರಿಗಳು ಬಳ್ಕೂರು, ಕಂಡೂರಿನಲ್ಲಿ ಬಾಕಿಯಾಗಿವೆ.

Advertisement

ಈ ನಿಯಮವು ಬಡವರ ಪಾಲಿಗೆ ಮರಳು ಬಿಸಿತುಪ್ಪವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಮರಳು ಬೇಡಿಕೆದಾರರ ಅಳಲು. ಇದಕ್ಕೆ ಜನಸಾಮಾನ್ಯರು ಕೊಡುವ ವಿವರ ಹೀಗಿದೆ: ಜಿಲ್ಲಾಡಳಿತದ ನಿಯಮದ ಪ್ರಕಾರ, 10 ಮೆಟ್ರಿಕ್‌ ಟನ್‌ (2.75 ಯುನಿಟ್‌) ಮರಳಿಗೆ 6,500 ರೂ. ದರ ನಿಗದಿಪಡಿಸಿತ್ತಾದರೂ ಗ್ರಾಹಕರು ಇದೇ ದರದಲ್ಲಿ 3 ಯುನಿಟ್‌ ಮರಳು ಪಡೆಯುತ್ತಿದ್ದಾರೆ. ಆದರೆ ವೇ ಬ್ರಿಜ್‌ ಮೂಲಕ ತೂಕ ಮಾಡಿ ಗ್ರಾಹಕರಿಗೆ ಮರಳು ವಿತರಿಸಿದಲ್ಲಿ ಕೇವಲ 2.25 ಯುನಿಟ್‌ ಪಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಗುತ್ತೆ. ಒದ್ದೆ ಮರಳು 10 ಮೆಟ್ರಿಕ್‌ ಟನ್‌ ದೊರೆತರೂ ನಷ್ಟ. ಅಥವಾ ಒಂದು ಲಾರಿ ಮರಳು ಎಂದು ತುಂಬಿದಾಗ ಸಾಧಾರಣ 3 ಯುನಿಟ್‌ ಬರುತ್ತದೆ. 10 ಟನ್‌ ಎಂದಾಗ ಮುಕ್ಕಾಲು ಲೋಡು ಮಾತ್ರ ದೊರೆತರೂ ನಷ್ಟ. ಈ ನಿಯಮದಿಂದ ಮರಳು ವಿತರಿಕರಿಗಾಗಲಿ ಅಥವಾ ಲಾರಿ ಮಾಲಕರಿಗಾಗಲಿ ಯಾವುದೇ ನಷ್ಟ ಸಂಭವಿಸುವುದಿಲ್ಲ. ಪರಿಣಾಮ ಬೀರುವುದು ನೇರವಾಗಿ ಗ್ರಾಹಕರ ಕಿಸೆಗೆ ಎಂಬ ಆತಂಕ ಇದೆ.

ಲಾರಿಗಳ ಸಾಲು
ಗಣಿ ಇಲಾಖೆ ಬುಧವಾರ ದಿಢೀರ್‌ರಾಗಿ ಮರಳು ಅನುಮತಿಯನ್ನು ತಡೆಹಿಡಿದೆ. ಪರಿಣಾಮ ಬಳ್ಕೂರು, ಕಂಡೂರು ಪರಿಸರದಲ್ಲಿ ನೂರಕ್ಕೂ ಅಧಿಕ ಲಾರಿಗಳು ಮರಳು ಹೇರಿಕೊಂಡಿದ್ದರೂ ಸಾಗಾಟ ಸಾಧ್ಯವಾಗದೇ ಬಾಕಿಯಾಗಿವೆ. ಮರಳನ್ನು ತೂಗಿಯೇ ವಿತರಿಸಬೇಕೆಂದು ಟೆಂಡರ್‌ ಷರತ್ತಿನಲ್ಲಿ ಇದ್ದರೂ ಗುತ್ತಿಗೆದಾರರು ಇನ್ನೂ ಅದಕ್ಕೆ ಮುಂದಾಗದಿರುವುದರಿಂದ ಸಮಸ್ಯೆಯಾಗಿದೆ.

ಕಲ್ಲಿನ ಕೊರತೆ
ಹಿರಿಯಡಕ ಮತ್ತು ಕುಂದಾಪುರದಲ್ಲಿ ಮರಳು ದೊರೆಯುತ್ತಿದ್ದರೂ ಕಾರ್ಕಳ, ಹೆಬ್ರಿ ತಾಲೂಕಿನವರಿಗೆ ಮರಳು ಪಡೆಯುವುದು ಸುಲಭವಾಗಿಲ್ಲ. ಮನೆ ಕಟ್ಟಲೆಂದು ಸಾಲ ಮಾಡಿ ಗುತ್ತಿಗೆದಾರರಿಗೆ ನೀಡಿ ಮನೆಯೂ ನಿರ್ಮಾಣವಾಗದೇ, ಸಾಲವೂ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ.

ಕುಂದಾಪುರ ತಾಲೂಕಿನಲ್ಲಿ ಅನುಮತಿಯ ಕೆಂಪುಕಲ್ಲಿನ ಗಣಿ 1 ಮಾತ್ರ ಇದ್ದು, ಕಾರ್ಕಳ ಭಾಗದಲ್ಲಿ ಕರಿಕಲ್ಲಿನ 45 ಕೋರೆಗಳಿವೆ. ಕಾನೂನು ರೀತ್ಯಾ ಅವುಗಳಿಗೆ ಅನುಮತಿ ಹೆಚ್ಚಿಸದಿದ್ದರೆ ಅಕ್ರಮ ಕೋರೆಗಳ ಸಂಖ್ಯೆ ಹೆಚ್ಚಾಗಿ ಮರಳು ಸಿಕ್ಕಿದರೂ ಕಲ್ಲು ಸಿಕ್ಕದು ಎಂಬ ಸ್ಥಿತಿ ಬರಲಿದೆ.
ಹಿರಿಯಡಕದಲ್ಲಿಲ್ಲ ಸಮಸ್ಯೆ ಹಿರಿಯಡಕದಲ್ಲಿ ಬಜೆ ಅಣೆಕಟ್ಟಿನ ಮರಳನ್ನು ನಿಯಮದಂತೆ ವೇಬ್ರಿಜ್‌ ಮೂಲಕ ತೂಕ ಮಾಡಿಯೇ ನೀಡಲಾಗುತ್ತಿದೆ. ಅಲ್ಲಿ ಸಮಸ್ಯೆ ಇಲ್ಲ ಎಂದು ಗಣಿ ಇಲಾಖೆ ತಿಳಿಸಿದೆ.

Advertisement

ಎರಡು ದಿನದಲ್ಲಿ ಇತ್ಯರ್ಥ
ಒದ್ದೆ ಮರಳನ್ನು ನೇರ ಲಾರಿಗಳಿಗೆ ತುಂಬುವಂತಿಲ್ಲ. ಸ್ಟಾಕ್‌  ಯಾರ್ಡ್‌ನಲ್ಲಿ ದಾಸ್ತಾನಿರಿಸಿ ಒಣಗಿ ಬಳಿಕ ತೂಕ ಮಾಡಿ ನೀಡಬೇಕು ಎನ್ನುವುದು ನಿಯಮ. ವೇ ಬ್ರಿಜ್‌ ನಿರ್ಮಿಸಲು ಗುತ್ತಿಗೆದಾರರು ಎರಡು ದಿನಗಳ ಕಾಲಾವಕಾಶ ಕೇಳಿದ್ದು ಅನಂತರ ಸರಿಯಾಗಿ ದೊರೆಯಲಿದೆ.
ಜಿ. ಜಗದೀಶ್‌, ಜಿಲ್ಲಾಧಿಕಾರಿ

ಲಾಬಿಯಿದೆಯೇ?
ಮಣ್ಣು, ಶಿಲೆಕಲ್ಲು, ಕೆಂಪುಕಲ್ಲು, ಜಲ್ಲಿ, ಎಂ ಸ್ಯಾಂಡ್‌, ಜೇಡಿಮಣ್ಣು ಇವೆಲ್ಲವೂ ಕೂಡ ಗಣಿ ಇಲಾಖೆಯ ಅಧೀನಕ್ಕೆ ಒಳಪಡುತ್ತವೆ. ಆದರೆ ಇದಾವುದಕ್ಕೂ ಇಲ್ಲದ ತೂಕದ ನಿಯಮ ಕೇವಲ ಮರಳಿಗೆ ಮಾತ್ರ ಸೀಮಿತ ಮಾಡುವುದರ ಹಿಂದೆ ಜಿಲ್ಲಾಡಳಿತ ಲಾಬಿ ನಡೆಸಿರುವ ಸಂಶಯವಿದೆ.
ದಿನೇಶ್‌ ಬಸ್ರೂರು, ಮರಳು ಗ್ರಾಹಕ

Advertisement

Udayavani is now on Telegram. Click here to join our channel and stay updated with the latest news.

Next