Advertisement

ಶಿವಮೊಗ್ಗ: ಗ್ರಾ.ಪಂ. ಆವರಣದಲ್ಲೇ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಸಿದ್ದತೆ!

06:53 PM Aug 11, 2022 | Team Udayavani |

ಶಿವಮೊಗ್ಗ: ಊರಿನಲ್ಲಿ ಸ್ಮಶಾನವಿಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು‌ ಗ್ರಾಮ ಪಂಚಾಯತ್ ಆವರಣದಲ್ಲೇ ಶವ ಸಂಸ್ಕಾರಕ್ಕೆ ಸಿದ್ದತೆ ನಡೆಸಿದ ಘಟನೆ ಸಂತೆ ಕಡೂರು ಗ್ರಾಮದಲ್ಲಿ ನಡೆದಿದೆ.

Advertisement

ಈ ಹಿಂದೆ ಸಂತೆ ಕಡೂರು ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿದ್ದ ಮೂರು ಎಕರೆ ಜಾಗದಲ್ಲಿ‌ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕಳೆದ‌ ವಾರ ಉಳಿದ ಜಾಗವನ್ನು ಸರ್ವೇ ಮಾಡಲು ಹೋದ ಅಧಿಕಾರಿಗಳ ಎದುರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದವರು ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ್ದ‌ರು.

ಗುರುವಾರ ಸಂತೆಕಡೂರು ಎಕೆ ಕಾಲನಿಯಲ್ಲಿ ವೃದ್ಧೆ ರಂಗಮ್ಮ ಎನ್ನುವವರು ಮೃತಪಟ್ಟಿದ್ದು, ಅವರ ಶವ ಸಂಸ್ಕಾರಕ್ಕೆಂದು ಸರ್ಕಾರದಿಂದ ಮಂಜೂರಾದ ಸ್ಮಶಾನ ಜಾಗಕ್ಕೆ ಕೊಂಡೊಯ್ದಾಗ ಅಂತಿಮ ಸಂಸ್ಕಾರಕ್ಕೆ ಕೆಲವರು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡು ಗ್ರಾಮಪಂಚಾಯತ್ ಕಾಂಪೌಂಡ್ ಒಳಗೆ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ಸ್ಥಳಕ್ಕೆ‌ ಹಿರಿಯ ಅಧಿಕಾರಿಗಳು ದೌಡಾಯಿಸಿ ವಿವಾದ ಬಗೆಹರಿಸಿ ಶವ ಸಂಸ್ಕಾರ ಬೇರೆಡೆ ನಡೆಸುವಂತೆ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಊರಿನ ಸ್ಮಶಾನದ ಜಾಗ ವಿವಾದದ ಕೇಂದ್ರ ಬಿಂದುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next