Advertisement

ಶಿವಮೊಗ್ಗ: ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ

09:13 AM Sep 21, 2019 | Sriram |

ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಗದ್ದೆ ಗ್ರಾಮದ ಅಖಿಲ್ ಅಹಮದ್ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಪ್ರಶಾಂತ್ ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಅಖಿಲ್ ಅಹಮದ್ ಅವರಿಗೆ ಉದ್ಯೋಗ ಸೃಜನೆ ಯೋಜನೆಯಲ್ಲಿ ಶಾಮಿಯಾನ ಅಂಗಡಿ ಆರಂಭಿಸಲು ಬ್ಯಾಂಕ್ ನಲ್ಲಿ ಸಬ್ಸಿಡಿ ಲೋನ್ ಗೆ ಶಿಫಾರಸ್ಸು ಮಾಡಲು 7 ಸಾವಿರ ರೂಪಾಯಿ ಲಂಚ ಕೇಳಿದ್ದ ಅಧಿಕಾರಿ.

ಇಂದು ರಾತ್ರಿ ಅಖಿಲ್ ಅಹಮದ್ ಅವರಿಂದ 7 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಎಸಿಬಿ ಡಿವೈಎಸ್ ಪಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್ ಪೆಕ್ಟರ್ ತಿಪ್ಪೆಸ್ವಾಮಿ, ಎನ್.ವೀರೇಂದ್ರ, ಸಿಬ್ಬಂದಿಗಳಾದ ನಾಗರಾಜ, ರಘುನಾಯ್ಕ, ಸುರೇಂದ್ರ, ಯೋಗೇಶಪ್ಪ, ಹರೀಶ್, ಶ್ರೀನಿವಾಸ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next