Advertisement

Shimoga; ಸಕ್ರೆಬೈಲು ಆನೆ ಬಿಡಾರದ ಸಮೀಪವೇ ಕಾಣಿಸಿಕೊಂಡ ಕಾಡಾನೆ

12:23 PM Dec 30, 2023 | keerthan |

ಶಿವಮೊಗ್ಗ: ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಹಾವಳಿ ಮಾಡಿದ್ದ ಕಾಡಾನೆಗಳು ಶನಿವಾರ ಸಕ್ರೆಬೈಲು ಆನೆ ಬಿಡಾರದ ಸಮೀಪವೇ ಕಾಣಿಸಿಕೊಂಡು ವಾಹನ ಸವಾರರಲ್ಲಿ ಭೀತಿ ಮೂಡಿಸಿವೆ.

Advertisement

ಆನೆ ಸವಾರಿಯಿಂದ ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸಕ್ರೆಬೈಲು ಆನೆ ಬಿಡಾರದ ಸಮೀಪದ ತೋಟವೊಂದರಲ್ಲಿ ಕಾಣಿಸಿಕೊಂಡ ಆನೆ ನಂತರ ಹೆದ್ದಾರಿಯಲ್ಲಿ ಬಂದು ನಿಂತಿತ್ತು. ವಾಹನ ಸವಾರರು ನಿಂತಲ್ಲೇ ನಿಂತಿದ್ದು, ಕೊನೆಗೆ ಸಕ್ರೆಬೈಲು ಆನೆ ಬಿಡಾರದ ಮಾವುತರು, ಕಾವಾಡಿಗಳು ಸಾಕಾನೆಗಳ ನೆರವಿನಿಂದ ಒಂಟಿ ಆನೆಯನ್ನು ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next