Advertisement

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

10:41 AM Jul 27, 2024 | keerthan |

ಶಿವಮೊಗ್ಗ: ಎಣ್ಣೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಏಕಾಂಗಿಯಾಗಿ ಹೆದ್ದಾರಿ ತಡೆದ ತಡೆದ ಘಟನೆ ಶಿವಮೊಗ್ಗದ ನಗರದ ಎನ್‌.ಟಿ.ರಸ್ತೆಯಲ್ಲಿ ನಡೆದಿದೆ. ಯುವಕನ ಹುಚ್ಚಾಟದ ಅವಾಂತರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Advertisement

ಮದ್ಯದ ಅಂಗಡಿಗೆ ತೆರಳಿದ್ದ ಯುವಕನಿಗೆ ಅಂಗಡಿಯವರು ಮದ್ಯ ಕೊಡಲು ಎಂದು ನಿರಾಕರಿಸಿದ್ದಾರೆ. ಹಣ ಕೊಟ್ಟರಷ್ಟೆ ಮದ್ಯ ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕ ಸುರಿವ ಮಳೆಯಲ್ಲಿ ದಿಢೀರನೆ ಎನ್‌.ಟಿ.ರಸ್ತೆಗೆ ಬಂದು ನಿಂತಿದ್ದಾನೆ.

ನಡು ರಸ್ತೆಯಲ್ಲಿ ಬಂದು ನಿಂತ ಯುವಕನ ಅವಾಂತರದಿಂದ ವಾಹನ ಸವರಾರು ಪರದಾಡಿದ್ದಾರೆ. ಕೊನೆಗೆ ಸ್ಥಳೀಯರು ಯುವಕನಿಗೆ ಬೆದರಿಸಿ, ತಿಳಿ ಹೇಳಿ ರಸ್ತೆಯಿಂದ ಪಕ್ಕಕ್ಕೆ ಸರಿಸಿದ್ದಾರೆ. ಯುವಕನ ಅವಾಂತರವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next