Advertisement

ಶಿಕಾರಿಪುರ: ಕೊಡಿ ಹರಿದ ಅಂಜನಾಪುರ ಜಲಾಶಯ… ರೈತರ ಮೊಗದಲ್ಲಿ ಸಂತಸ

09:16 AM Jul 25, 2023 | Team Udayavani |

ಶಿಕಾರಿಪುರ: ತಾಲ್ಲೂಕಿನ ರೈತರ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಹಾಗೂ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಂಜನಾಪುರ ಜಲಾಶಯ ಮಂಗಳವಾರ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಮೇಲೆ ನೀರು ಹರಿಯುತ್ತಿದೆ.

Advertisement

ಅಂಜನಾಪುರ ಜಲಾಶಯ ಭರ್ತಿಯಾಗಿ ಕೋಡಿ ಮೇಲೆ ನೀರು ಹರಿಯುತ್ತಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ.

ಸುಮಾರು 22 ರಿಂದ 23 ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಅಂಜನಾಪುರ ಜಲಾಶಯ ಹೊಂದಿದೆ. ತಾಲ್ಲೂಕಿನ ರೈತರು ಭತ್ತ ಬೆಳೆಯಲು ಈ ಜಲಾಶಯದ ನೀರನ್ನು ಅವಲಂಭಿಸಿದ್ದಾರೆ. ಇದೀಗ ಜಲಾಶಯ ತುಂಬಿ ಹರಿಯುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: Manipura ವಿಡಿಯೋ ಪ್ರಕರಣ: ಏಳನೇ ಆರೋಪಿ ಬಂಧನ, ಆರೋಪಿಗಳ ಅಡಗುತಾಣಗಳ ಮೇಲೆ ಪೊಲೀಸರ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next