Advertisement

ಶೆಟ್ಟರ್‌ ಪಕ್ಕಾ RSS, ಕಾಂಗ್ರೆಸ್‌ಗೆ ಬರಲ್ಲ…: ಎಸ್‌.ಎಸ್‌. ಮಲ್ಲಿಕಾರ್ಜುನ್‌

08:15 PM Apr 14, 2023 | Team Udayavani |

ದಾವಣಗೆರೆ: ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪಕ್ಕಾ ಆರೆಸ್ಸೆಸ್‌. ಹಾಗಾಗಿ ಬಿಜೆಪಿಯಲ್ಲಿ ಟಿಕೆಟ್‌ ತಪ್ಪಿದ್ದರಿಂದ ಅವರು ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇಲ್ಲ ಎಂದು ಮಾಜಿ ಸಚಿವ, ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಜಗದೀಶ ಶೆಟ್ಟರ್‌ ನಮಗೆ ಸಂಬಂಧಿಕರಾಗಿರುವುದರಿಂದ ಅವರನ್ನು ಮನೆಗೆ ಕರೆಯಬಹುದೇ ವಿನಾ ಪಕ್ಷಕ್ಕಲ್ಲ. ಅವರಷ್ಟೇ ಅಲ್ಲ, ಬಸಣ್ಣ (ಸಿಎಂ ಬಸವರಾಜ ಬೊಮ್ಮಾಯಿ) ಅವರನ್ನೂ ಕರೆಯಬಹುದು. ಆದರೆ ಅದು ಮನೆಗೆ ಸೀಮಿತ, ರಾಜಕೀಯಕ್ಕಲ್ಲ. ಬಿಜೆಪಿಯಲ್ಲಿ ಟಿಕೆಟ್‌ ಕೊಡದೆ ಇರುವುದರಿಂದ ಬೇಸತ್ತು ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದವರನ್ನೆಲ್ಲ ಬಿಜೆಪಿ “ಆಪರೇಷನ್‌ ಕಮಲ’ ಮಾಡಿ ಸೇರ್ಪಡೆ ಮಾಡಿಕೊಂಡಿತು. ಈಗ ಕಾಲ ಬದಲಾಗಿದೆ. ನಾವು ಕರೆಯದೆ ಇದ್ದರೂ ಬಿಜೆಪಿ ಹಾಗೂ ಇತರ ಪಕ್ಷಗಳಿಂದ ಮುಖಂಡರು ಕಾಂಗ್ರೆಸ್‌ಗೆ ಬರಲು ಸರದಿಯಲ್ಲಿ ನಿಂತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next