Advertisement

Hanur: ಚಿರತೆ ದಾಳಿಗೆ ಕುರಿಗಳು ಬಲಿ; ಸಾವಿರಾರು ರೂ. ನಷ್ಟ

10:24 AM Feb 27, 2024 | Team Udayavani |

ಹನೂರು (ಚಾಮರಾಜನಗರ): ಚಿರತೆ ದಾಳಿಗೆ 4 ಕುರಿಗಳು ಬಲಿಯಾಗಿರುವ ಘಟನೆ ಪೆ. 26ರ ಸೋಮವಾರ ತಡರಾತ್ರಿ ಸಂದನಪಾಳ್ಯ ಗ್ರಾಮದಲ್ಲಿ ನಡೆದಿದೆ.

Advertisement

ಈ ಕುರಿಗಳು ಗ್ರಾಮದ ಪಾಸ್ಕ ಮೇರಿ ಎಂಬುವರಿಗೆ ಸೇರಿವೆ.

ಪಾಸ್ಕ ಮೇರಿ ಎಂಬ ರೈತ ಮಹಿಳೆ ಜೀವನಕ್ಕಾಗಿ 4 ಕುರಿಗಳನ್ನು ಸಾಕುತ್ತಿದ್ದರು. ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಸೋಮವಾರ ತಡರಾತ್ರಿ ಚಿರತೆ ದಾಳಿ ನಡೆಸಿ 4 ಕುರಿಗಳನ್ನು ಬಲಿ ಪಡೆದುಕೊಂಡಿದೆ.

ಇದರಿಂದ ಸಾವಿರಾರು ರೂ. ನಷ್ಟವಾಗಿದ್ದು, ರೈತನಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಜೀವನಕ್ಕೆ ಆಧಾರವಾಗಿದ್ದ ಕುರಿ: ತಾನು ಈ ಮೊದಲೇ ವಿಕಲಚೇತನ ಮಹಿಳೆಯಾಗಿದ್ದು, ಜೀವನಕ್ಕಾಗಿ 4 ಕುರಿಗಳನ್ನು ಸಾಕುತ್ತಿದ್ದೆ‌. ಕುರಿಗಳನ್ನು ಕಳೆದುಕೊಂಡ ಕಾರಣ ಜೀವನ ನಡೆಸಲು ಕಷ್ಟವಾಗಿದೆ ಎಂದು ಮೇರಿ ಅಳಲು ತೋಡಿಕೊಂಡರು.

Advertisement

ಚಿರತೆ ಸೆರೆಗೆ ಆಗ್ರಹ: ಈ ಭಾಗದಲ್ಲಿ ಇದು ಎರಡನೇ ಬಾರಿ ದಾಳಿಯಾಗಿದ್ದು, ಜನರು ಭಯಭೀತರಾಗಿದ್ದಾರೆ ಇದರಿಂದ ಆದಷ್ಟು ಬೇಗ ಚಿರತೆ ಸೆರೆಗೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next