Advertisement

ಕೈಕೊಟ್ಟ ಪ್ರೇಮಿಗಾಗಿ ಧರಣಿ

11:02 AM Sep 11, 2019 | Team Udayavani |

ಕೊಪ್ಪಳ: ಪ್ರಿಯತಮ ಕೈಕೊಟ್ಟ ಎಂದು ಮನನೊಂದು ಪ್ರೇಯಸಿ ಹುಡುಗನ ಮನೆಯ ಮುಂದೆ ಸೋಮವಾರ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದಲ್ಲಿ ನಡೆದಿದೆ.

Advertisement

ಹುಬ್ಬಳ್ಳಿಯಲ್ಲಿ ಪ್ಯಾರಾ ಮೆಡಿಕಲ್ ಅಭ್ಯಾಸ ಮಾಡುತ್ತಿರುವ ಭಾನಾಪೂರ ಗ್ರಾಮದ ಯುವತಿ ಶಕುಂತಲಾ ಕಳೆದ ಕೆಲವು ತಿಂಗಳ ಹಿಂದೆ ಅದೇ ಗ್ರಾಮದ ಯುವಕ ವಸಂತನನ್ನು ಪ್ರೀತಿ ಮಾಡಿದ್ದಾಳೆ. ಇಬ್ಬರ ನಡುವೆ ಪ್ರೇಮಾಂಕುರ ನಡೆದಿದೆ. ಯುವಕ ಹೆಚ್ಚಾಗಿ ಗಂಗಾವತಿಯ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರಿಂದ ಅಲ್ಲಿಯೂ ಪಾರ್ಕ್‌ನಲ್ಲಿ ಇಬ್ಬರು ಸುತ್ತಾಡಿದ್ದಾರೆ.

ಆದರೆ ಕೆಲವು ದಿನಗಳ ಬಳಿಕ ಪ್ರಿಯಕರ ತನ್ನ ಪ್ರೇಯಸಿಯನ್ನು ನಿರಾಕರಿಸಿದ್ದರಿಂದ ಮನ ನೊಂದ ಪ್ರಿಯತಮೆ ನ್ಯಾಯಕ್ಕಾಗಿ ಕುಕನೂರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಳು. ಪೊಲೀಸರ ಮಧ್ಯಸ್ಥಿಕೆಯಲ್ಲಿಯೇ ಸಂಧಾನ ಮಾತುಕತೆ ನಡೆದಿತ್ತು. ಪ್ರಿಯತಮನ ಜೊತೆ ಯುವತಿ ದೇವಸ್ಥಾನದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಕೊಂಡಿದ್ದಳು. ಆದರೆ ನಾಲ್ಕು ದಿನ ಬಿಟ್ಟು ಗಂಡನ ಮನೆಗೆ ಬರುವಂತೆ ಹೇಳಿದ್ದ ಯುವಕನ ಸಂಬಂಧಿಕರು ಹೇಳಿದ್ದರು. ಆದರೆ ನಾಲ್ಕು ದಿನ ಬಿಟ್ಟು ಬಂದು ಪ್ರಿಯಕರ ಮನೆಯಲ್ಲಿ ಕೇಳಿದರೆ ಪ್ರೇಮಿ ನಾಪತ್ತೆಯಾಗಿದ್ದಾನೆ.

ಸೋಮವಾರ ಗ್ರಾಮದಲ್ಲಿ ನನ್ನ ಗಂಡ ಬರಬೇಕು. ನನ್ನನ್ನು ಮನೆಯ ಒಳಗೆ ಕರೆದುಕೊಂಡು ಹೋಗಬೇಕೆಂದು ಪ್ರಿಯತಮೆ ಶಕುಂತಲಾ ಮನೆಯ ಮುಂದೆ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗವೂ ನಡೆದಿದೆ. ಆದರೆ ಯುವಕ ಮಾತ್ರ ನಾಪತ್ತೆಯಾಗಿದ್ದಾನೆ. ಇದರ ಹಿಂದೆ ಪಾಲಕರ ಕೈವಾಡವಿದೆ ಎಂದು ಆಪಾದನೆ ಕೇಳಿ ಬಂದಿದ್ದರು. ಯುವತಿ ಮಾತ್ರ ಪೊಲೀಸರ ಮೇಲೆಯೇ ಆರೋಪ ಮಾಡುತ್ತಿದ್ದಾಳೆ. ಕುಕನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next