Advertisement

ಮಕ್ಕಳಿದ್ದೂ ಅನಾಥೆಯಾದ ತಾಯಿ ; ಸಾಮಾಜಿಕ ಕಾರ್ಯಕರ್ತರಿಂದ ಅಂತ್ಯಕ್ರಿಯೆ

07:54 AM Jul 10, 2020 | mahesh |

ಉಡುಪಿ: ದೊಡ್ಡ ಹುದ್ದೆಗಳಲ್ಲಿರುವ ಇಬ್ಬರು ಮಕ್ಕಳಿದ್ದರೂ ಅವರಿಂದ ಪರಿತ್ಯಕ್ತರಾಗಿರುವ ಹಿರಿಯ ಜೀವಗಳ ಕಣ್ಣೀರ ಕಥೆ ಇದು. ತಾಯಿ ಮೃತಪಟ್ಟರೂ ಮಕ್ಕಳು ಬಾರದೆ ಇದ್ದುದರಿಂದ ಸಾಮಾಜಿಕ ಕಾರ್ಯಕರ್ತರ ನೆರವು ಪಡೆದು ಅಂತ್ಯಸಂಸ್ಕಾರ ನಡೆಸುವ ಅನಿವಾರ್ಯ ಈ ಅಸಹಾಯಕ ವೃದ್ಧನದಾಯಿತು.

Advertisement

ಎಚ್‌. ವೀಣಾ ಶಾನುಭಾಗ್‌ (69) ಮೃತ ಮಹಿಳೆ. ಅನೇಕ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಪತಿ ಎಚ್‌. ಶ್ರೀನಿವಾಸ್‌ ಶಾನುಭಾಗ್‌ (79) ನೋಡಿಕೊಳ್ಳುತ್ತಿದ್ದರು. ಈ ದಂಪತಿಗೆ ನೆರವು ಕೋರಿದ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಕೆ. ರಾಘವೇಂದ್ರ ಕಿಣಿ ಅವರು ದಂಪತಿಯನ್ನು ಸಂಪರ್ಕಿಸಿ ನೆರವಾದರು. ದಂಪತಿ ಚಿಟ್ಪಾಡಿ ಭಾಗ್ಯಮಂದಿರದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಮಗಳು ಬಿಎಡ್‌ ಮುಗಿಸಿ ಸಾಗರದಲ್ಲಿದ್ದಾರೆ. ಮಗ ಬಿಇ, ಎಂಟೆಕ್‌ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದಾರೆ. ಆದರೆ ಆನೇಕ ವರ್ಷಗಳಿಂದ ಹೆತ್ತವರ ಸಂಪರ್ಕದಲ್ಲಿಲ್ಲ. ಗುರುವಾರ ವೀಣಾ ಮೃತಪಟ್ಟಿದ್ದು, ಅಂತ್ಯಕ್ರಿಯೆ ನಡೆಸಲು ಪರದಾಡುತ್ತಿದ್ದ ಶ್ರೀನಿವಾಸ್‌ ಅವರಿಗೆ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಕಿಣಿ, ಮಂಜುನಾಥ ನಿಟ್ಟೂರು, ಕಿಶೋರ್‌ ಕುಮಾರ್‌ ಕರಂಬಳ್ಳಿ, ಮಂಜುನಾಥ ಹೆಬ್ಟಾರ್‌ ಅವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next