Advertisement

ಎನ್‌ಎಸ್‌ಸಿ ಹೇಳಿಕೆ ತಿರಸ್ಕರಿಸಿದ ಷರೀಫ್

07:00 AM May 16, 2018 | Team Udayavani |

ಇಸ್ಲಾಮಾಬಾದ್‌: ಮುಂಬೈ ದಾಳಿಯ ಬಗ್ಗೆ ತಮ್ಮ ಹೇಳಿಕೆಯನ್ನು ಖಂಡಿಸಿರುವ ಪಾಕಿಸ್ತಾನದ ರಾಷ್ಟ್ರೀಯ
ಸುರಕ್ಷತಾ ಮಂಡಳಿ(ಎನ್‌ಎಸ್‌ಸಿ) ಅಭಿಪ್ರಾಯವನ್ನು ಮಾಜಿ ಪ್ರಧಾನಿ ನವಾಜ್‌ ಷರೀಫ್ ತಿರಸ್ಕರಿಸಿದ್ದಾರೆ.

Advertisement

ದೇಶದ್ರೋಹದ ಕೆಲಸವನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ನೀವೇ ಪರಿಶೀಲಿಸಿ ಎಂದು ಮಂಡಳಿಗೆ
ಮತ್ತೆ ಸವಾಲು ಹಾಕಿದ್ದಾರೆ ಷರೀಫ್. ಮಂಡಳಿ ಕೈಗೊಂಡ ಅಭಿಪ್ರಾಯದಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ. 

ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಅಡಿಗಲ್ಲು ಇರಿಸಿದವರು  ಯಾರು ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ. ಇದೇ ವೇಳೆ ಕಾರ್ಗಿಲ್‌ ದಾಳಿ ಸಂದರ್ಭದಲ್ಲಿ ಸೇನೆ ಹಿಂಪಡೆಯಲು ನವಾಜ್‌ ಷರೀಫ್ರೇ ಕಾರಣ ಎಂದು ಮಾಜಿ ಅಧ್ಯಕ್ಷ
ಜ.ಪರ್ವೇಜ್‌ ಮುಷ ಫ್ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next