Advertisement

ಅಪಾರ ಕೃಷಿಭೂಮಿ ನೀರು ಪಾಲು

10:35 PM May 20, 2020 | Sriram |

ಬೆಳ್ಮಣ್‌: ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದ್ದ ಸಂಕಲ ಕರಿಯ ಶಾಂಭವಿ ನದಿ ಅಣೆಕಟ್ಟುವಿನ ಬಳಿಯ ಉಡುಪಿ ಜಿಲ್ಲಾ ಭಾಗದ ತಡೆಗೋಡೆ ಕುಸಿದು ಅಪಾರ ಕೃಷಿ ಭೂಮಿ ನೀರು ಪಾಲಾಗಿದೆ.

Advertisement

ಮಳೆಗಾಲದ ಸಂದರ್ಭ ಅಣೆಕಟ್ಟುವಿನ ಇಕ್ಕೆಲಗಳಲ್ಲಿ ತಡೆಗೋಡೆ ಕುಸಿದು ಅಕ್ಕ ಪಕ್ಕದ ಕೃಷಿಭೂಮಿಗಳು ನೀರು ಪಾಲಾಗಿದ್ದವು. ಇವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಬಾಗದಲ್ಲಿ ಆ ಭಾಗದ ಜಿಲ್ಲಾಡಳಿತ ಹಾಗೂ ಇಲಾಖೆ ನೂತನ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದರೂ ಉಡುಪಿ ಭಾಗದಲ್ಲಿನ ಕುಸಿತದ ಬಗ್ಗೆ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲಾಖೆ ತಲೆ ಕೆಡಿಸದಿರುವುದು ಈ ಭಾಗದ ಕೃಷಿಕರ ಬೇಸರಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತಕ್ಕೂ ದೂರು
ಸಂಕಲಕರಿಯ ಮೇರಿ ರೋಮನ್‌ ಸೆರಾವೋರವರ ಗದ್ದೆ ಅರ್ಧಕ್ಕೂ ಹೆಚ್ಚು ಕುಸಿದು ಅಣೆಕಟ್ಟುವಿನ ಪರಿಣಾಮ ಇದೀಗ ಆ ಕುಟುಂಬ ಪರಿತಪಿಸುವಂತಾಗಿದೆ.

ಈಗಾಗಲೇ ಪಂಚಾಯತ್‌ ಮಟ್ಟದಿಂದ ಹಿಡಿದು ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದ್ದು ಯಾರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next