Advertisement

ಕ್ರಿಕೆಟ್ ಬಿಟ್ಟು ಬೇರೆನೂ ಮಾತಾಡಬೇಡಿ : ಕ್ರಿಕೆಟ್ ದೇವರಿಗೆ ಪವಾರ್ ಚಾಟಿ

08:26 PM Feb 07, 2021 | Team Udayavani |

ಮುಂಬೈ : ರೈತರ ಪ್ರತಿಭಟನೆ ಬೆಂಬಲಿಸಿ ಮಾತಾಡಿದ್ದ ಹಾಲಿವುಡ್ ಪಾಪ್ ಗಾಯಕಿ ರಿಹಾನಾಗೆ ಟಾಂಗ್ ನೀಡಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೋಲ್ಕರ್ ಅವರಿಗೆ ಕ್ರಿಕೆಟ್ ಹೊರತಾಗಿ ಬೇರೆನೂ ಮಾತಾಡಬೇಡಿ ಎಂದು ಎನ್ ಪಿ ಸಿ ನಾಯಕ ಶರದ್ ಪವಾರ್ ತಿರುಗೇಟು ನೀಡಿದ್ದಾರೆ.

Advertisement

ಸಚಿನ್ ಅವರು ಬೇರೆ ಕ್ಷೇತ್ರದ ( ಕ್ರಿಕೆಟ್ ಹೊರತು ಪಡಿಸಿ) ಬಗ್ಗೆ ಮಾತಾಡುವ ಮುನ್ನ ಎಚ್ಚರಿಕೆ ಯಿಂದಿರುವುದು ಉತ್ತಮ ಎಂದು ನಯವಾಗಿ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ :ರಾಜ್ಯ ಪ್ರವಾಸ ಮಗಿಸಿ ದೆಹಲಿಗೆ ರಾಷ್ಟ್ರಪತಿ ಪ್ರಯಾಣ…ಸಿಎಂರಿಂದ ಆತ್ಮೀಯ ಬೀಳ್ಕೊಡುಗೆ

ಇನ್ನು ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ದೆಹಲಿ ಗಡಿಯಲ್ಲಿ 80 ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ರಿಹಾನಾ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಗೆ ಖಾರವಾಗಿ ಉತ್ತರಿಸಿದ್ದ ಸಚಿನ್, ‘’ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ,.. ಇಲ್ಲಿ ಬಾಹ್ಯವ್ಯಕ್ತಿ ಅಥವಾ ಶಕ್ತಿಗಳು ಪ್ರೇಕ್ಷಕರಾಗಬಹುದು… ಆದರೆ ಪಾತ್ರದಾರಿಗಳಲ್ಲ. ಭಾರತೀಯರಿಗೆ ಭಾರತ ಏನು ಎಂಬುದು ತಿಳಿದಿದೆ ಮತ್ತು ಭಾರತಕ್ಕಾಗಿ ಭಾರತವೇ ನಿರ್ಧರಿಸಬೇಕು ಎಂದು ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next