Advertisement

ನೊಂದು ರಾಜೀನಾಮೆ

11:12 PM Sep 28, 2019 | mahesh |

ಮುಂಬೈ: ಬ್ಯಾಂಕ್‌ ಹಗರಣದಲ್ಲಿ ಕಾರಣವಿಲ್ಲದೇ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೆಸರು ತಳುಕು ಹಾಕಿಸಿದ್ದನ್ನು ಕಂಡು ಬೇಸರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಪಕ್ಷದ ಹಿರಿಯ ನಾಯಕ ಅಜಿತ್‌ ಪವಾರ್‌ ತಿಳಿಸಿದ್ದಾರೆ. ಶುಕ್ರವಾರವಷ್ಟೇ ರಾಜೀನಾಮೆ ನೀಡಿದ್ದ ಅಜಿತ್‌, ಶನಿವಾರ ಶರದ್‌ ಪವಾರ್‌ರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಜಿತ್‌, ಎನ್‌ಸಿಪಿ ಮುಖ್ಯಸ್ಥರ ವಿರುದ್ಧ ವಿನಾಕಾರಣ ಆರೋಪ ಹೊರಿಸಿದ್ದ‌ರಿಂದ ರಾಜೀನಾಮೆ ನೀಡಿದ್ದೇನೆ ಎಂದಿದ್ದು, ಶರದ್‌ ಏನು ಹೇಳುತ್ತಾರೋ ಅದರಂತೆ ನಡೆಯುತ್ತೇನೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next