Advertisement

ಶಂಕರಪುರ ಮಲ್ಲಿಗೆ ದರ ಏರಿಕೆ: ಈಗ ಒಂದು ಅಟ್ಟೆಗೆ 820 ರೂ.!

06:00 AM Jun 25, 2018 | |

ಶಿರ್ವ: ಜೂನ್‌ ಮೊದಲ ವಾರದಲ್ಲಿ  ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ಬೆಳೆ ಮೂರನೇ ವಾರದಲ್ಲಿ ಗಗನಕ್ಕೇರಿದೆ. ಜೂ. 24ರಂದು ಅಟ್ಟೆಗೆ 820 ರೂ. ಆಗಿದೆ.  

Advertisement

ಅಧಿಕ ಮಾಸ ಮುಗಿದು ಮದುವೆ ಸಹಿತ ಶುಭ ಸಮಾರಂಭಗಳು ಪ್ರಾರಂಭಗೊಂಡಿದ್ದು ಮಲ್ಲಿಗೆಗೆ ಬೇಡಿಕೆ ಕುದುರಲು ಕಾರಣವಾಗಿದೆ. ಮಲ್ಲಿಗೆಯ ದರದ ಏರುಗತಿಯಿಂದಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇದರೊಂದಿಗೆ ನಿರಂತರ ಸುರಿವ ಮಳೆಯಿಂದಾಗಿ ಹೂವಿನ ಮೊಗ್ಗು ಹಾಳಾಗುತ್ತಿದ್ದು ಬೆಳೆ ಕಡಿಮೆಯಾಗಿದೆ. ಬೆಳೆ ಕಡಿಮೆಯಾಗಿ ಕಟ್ಟೆಗೆ ಬರುವ ಹೂವಿನ ಪ್ರಮಾಣವೂ ಕಡಿಮೆಯಾಗಿದೆ.

ಮಲ್ಲಿಗೆಯ ಜತೆ ಜಾಜಿಯ ಬೆಲೆಯೂ ಏರಿದ್ದು ರವಿವಾರ ಅಟ್ಟಿಗೆ  ರೂ. 420 ಆಗಿದೆ. ಆಟಿ ತಿಂಗಳಲ್ಲಿ ಶುಭ ಸಮಾರಂಭಗಳು ಕಡಿಮೆಯಾಗಲಿದ್ದು, ಈ ಸಂದರ್ಭ ಬೆಳೆ ಇಳಿಯುವ ನಿರೀಕ್ಷೆ  ಗ್ರಾಹಕರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next