Advertisement

ಶಂಕರನಾರಾಯಣ ಪೊಲೀಸ್‌ಗೆ ಕೋವಿಡ್, 18 ಸಿಬಂದಿಗೆ ಕ್ವಾರಂಟೈನ್‌; ಠಾಣೆ ಸ್ಥಳಾಂತರ

10:09 AM Jun 02, 2020 | sudhir |

ಸಿದ್ದಾಪುರ: ಶಂಕರನಾರಾಯಣ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಕೋವಿಡ್ ದೃಢವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಪೊಲೀಸ್‌ ಠಾಣೆಯನ್ನು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಜತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 18 ಸಿಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

Advertisement

ಕೋಟತಟ್ಟು ಸೀಲ್‌ಡೌನ್‌
ಕೋಟ: ಸಮೀಪ ಕೋಟತಟ್ಟುವಿನ ನಿವಾಸಿ ಮಹಿಳಾ ಕಾನ್‌ಸ್ಟೆಬಲ್‌ಗೆ ಕೋವಿಡ್ ಬಾಧಿಸಿರುವ ಹಿನ್ನೆಲೆಯಲ್ಲಿ ಅವರ ಮನೆಯ ಪರಿಸರದ 50 ಮೀಟರ್‌ ವ್ಯಾಪ್ತಿಯ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಕುಂದಾಪುರ, ಬೈಂದೂರು: ವಿವಿಧೆಡೆ ಸೀಲ್‌ಡೌನ್‌
ಕುಂದಾಪುರ: ಕ್ವಾರಂಟೈನ್‌ ಅವಧಿ ಮುಗಿದು ಗಂಟಲ ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಮರಳಿದ ಕೆಲವರಲ್ಲಿ ಕೋವಿಡ್ ಪಾಸಿಟಿವ್‌ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಮನೆಗಳ ಸುಮಾರು 200 ಮೀ. ಪ್ರದೇಶವನ್ನು ಸೀಲ್‌ಡೌನ್‌ ಮಾಡುವ ಕ್ರಮ ಸೋಮವಾರವೂ ಮುಂದುವರಿದಿದೆ.

ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚುಂಗಿಗುಡ್ಡೆ, ಆಲೂರು ಪಂಚಾ ಯತ್‌ ವ್ಯಾಪ್ತಿಯ ಸೆಳಕೋಡು, ಹರ್ಕೂರು, ದೊಂಬೆ ಶಿರೂರು, ಯಡ್ತರೆ, ಕೆರ್ಗಾಲ್‌ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಒಟ್ಟು 15 ಪ್ರಕರಣಗಳು ಕಂಡು ಬಂದಿದ್ದು ಕಂಟೈನ್ಮೆಂಟ್‌ ಝೋನ್‌ ಎಂದು ಸೀಲ್‌ಡೌನ್‌ ಮಾಡಲಾಗಿದೆ. ಶಂಕರನಾರಾಯಣ ಠಾಣೆಗೆ ಸೋಂಕಿತರೊಬ್ಬರು ಭೇಟಿ ನೀಡಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸೇಶನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next