Advertisement

ಶಂಕರ ನಾರಾಯಣನ್‌ ಕೆನರಾ ಬ್ಯಾಂಕ್‌ ಹೊಸ ಎಂಡಿ

12:43 AM Apr 18, 2019 | Lakshmi GovindaRaju |

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಆರ್‌.ಎ.ಶಂಕರ ನಾರಾಯಣನ್‌ ಅವರು ಏ.15ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಈ ಹಿಂದೆ ಶಂಕರ ನಾರಾಯಣನ್‌ ಅವರು 2017ರ ಸೆಪ್ಟೆಂಬರ್‌ವರೆಗೆ ವಿಜಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಅವರು, ಸಾರ್ವಜನಿಕ ಆಡಳಿತದಲ್ಲಿ ಪಿಜಿ ಮತ್ತು ಎಂಬಿಎ ಹಣಕಾಸು, ಪಿಜಿಡಿಪಿಎಂ, ಪಿಜಿಡಿಎಫ್‌ಎಂ ಮುಂತಾದ ಪದವಿಗಳನ್ನು ಪಡೆದಿದ್ದಾರೆ.

1983ರಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸೇವೆ ಆರಂಭಿಸಿದ ಅವರು, ಹಲವು ಶಾಖೆಗಳಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಖಜಾನೆ, ಅಂತಾರಾಷ್ಟ್ರೀಯ ಬ್ಯಾಂಕಿಂಗ್‌, ಕಾರ್ಪೊರೇಟ್‌ ಕ್ರೆಡಿಟ್‌, ರಿಸ್ಕ್ ಮ್ಯಾನೇಜೆಂಟ್‌, ರಿಟೇಲ್‌, ಮಾರ್ಕೆಟಿಂಗ್‌, ರೆಕವರಿ, ಮಾನವ ಸಂಪನ್ಮೂಲ ಮುಂತಾದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಗಳಿಸಿದ್ದಾರೆ ಎಂದು ಬ್ಯಾಂಕ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next