Advertisement

ಶಂಕರ ಬಿದರಿಗೆ ಮಾತೃವಿಯೋಗ

01:10 AM Dec 31, 2018 | |

ಬನಹಟ್ಟಿ: ಐಪಿಎಸ್‌ ನಿವೃತ್ತ ಅಧಿಕಾರಿ ಶಂಕರ ಬಿದರಿ ಅವರ ತಾಯಿ ಗುರುಬಾಯಿ ಮಹಾದೇವಪ್ಪ ಬಿದರಿ (83) ಭಾನುವಾರ ಬೆಳಗ್ಗೆ ನಾಲ್ಕು ಘಂಟೆಗೆ ನಿಧನರಾದರು.

Advertisement

ಮೃತರು ಪುತ್ರರಾದ ಶಂಕರ ಬಿದರಿ ಸೇರಿ ಆರು ಜನ ಪುತ್ರರು ಮೂವರು ಪುತ್ರಿಯರು, ಅಪಾರ ಬಂಧು ಬಳಗ ಅಗಲಿದ್ದಾರೆ.
ಕೆಲವು ತಿಂಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿಯಲ್ಲಟ್ಟಿಯಲ್ಲಿನ ತೋಟದ ಮನೆಯಲ್ಲಿ ಶಂಕರ ಬಿದರಿ ಅವರ ತಂದೆ ಸಮಾಧಿ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ಯಾತ್ರೆಯಲ್ಲಿ ಬಾಗಲಕೋಟೆ ಬಸವೇಶ್ವರ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next